Advertisement

ಚಿಕ್ಕಮಗಳೂರು: ಆಸ್ತಿಗಾಗಿ ಅಣ್ಣ, ಅತ್ತಿಗೆಗೆ ವಿಷ ಹಾಕಿ ಕೊಂದ ತಮ್ಮ!

03:55 PM Jan 23, 2018 | Sharanya Alva |

ಚಿಕ್ಕಮಗಳೂರು: ಆಸ್ತಿಗಾಗಿ ತಮ್ಮ ಒಡಹುಟ್ಟಿದ ಅಣ್ಣ ಹಾಗೂ ಅತ್ತಿಗೆಗೆ ಊಟದಲ್ಲಿ ವಿಷ ಬೆರೆಸಿ ಕೊಂದ ಹೃದಯವಿದ್ರಾವಕ ಘಟನೆ ಮೂಡಿಗೆರೆ ತಾಲೂಕು ಕಣಚೂರಿನಲ್ಲಿ ನಡೆದಿದೆ.

Advertisement

ನಾಲ್ಕು ಎಕರೆ ಆಸ್ತಿ ತನಗೊಬ್ಬನಿಗೆ ಸಿಗಬೇಕೆಂಬ ದುರಾಸೆಯಿಂದ ತಮ್ಮ ದಿನೇಶ್ ಎಂಬಾತ ಈ ದುಷ್ಕೃತ್ಯ ಎಸಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಣ್ಣ ವೆಂಕಟೇಶ್ ಹಾಗೂ ಅತ್ತಿಗೆ ರುಕ್ಮಿಣಿಗೆ ದಿನೇಶ್ ಊಟದಲ್ಲಿ ವಿಷ ಬೆರೆಸಿ ಕೊಟ್ಟಿದ್ದ, ಊಟದ ನಂತರ ದಂಪತಿ ತೀವ್ರವಾಗಿ ಅಸ್ವಸ್ಥಗೊಂಡಿದ್ದರು, ಕೂಡಲೇ ನೆರೆಹೊರೆಯವರು ಮಣಿಪಾಲದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ದಂಪತಿ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.

ದಂಪತಿ ಸಾವನ್ನಪ್ಪಿದ್ದು, ಅವರ ಮಕ್ಕಳು ಅನಾಥರಾದಂತಾಗಿದೆ. ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next