Advertisement

NDA ಅಭ್ಯರ್ಥಿ ಗೆಲ್ಲಿಸುವ ಮಾತು ಕೊಡಿ: ಎಚ್‌ಡಿಕೆ ಪರೋಕ್ಷ ಸುಳಿವು

12:30 AM Oct 07, 2024 | Team Udayavani |

ರಾಮನಗರ: ಎನ್‌ಡಿಎ ಅಭ್ಯರ್ಥಿಯನ್ನು ಉಪ ಚುನಾವಣೆ ಕಣಕ್ಕಿಳಿಸುತ್ತೇವೆ. ಇಲ್ಲಿ ಯಾರೇ ಅಭ್ಯರ್ಥಿ ಆದರೂ ಅವರನ್ನು ಗೆಲ್ಲಿಸಿ ಕೊಡಿ. ನೀವು ನನಗೆ ಮಾತು ಕೊಡಿ. ನಿಮಗೆ ದ್ರೋಹ ಮಾಡುವು ದಿಲ್ಲ, ನನ್ನನ್ನು ನಂಬಿ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರ ಸ್ವಾಮಿ ಚನ್ನ ಪಟ್ಟಣದ ಜೆಡಿಎಸ್‌ ಕಾರ್ಯಕರ್ತರ ಮುಂದೆ ಭಾವನಾತ್ಮಕ ವಾಗಿ ಮಾತನಾಡಿದ್ದು, ನಿಖಿಲ್‌ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಬಗ್ಗೆ ಪರೋಕ್ಷ ಸುಳಿವು ನೀಡಿದ್ದಾರೆ.

Advertisement

ಚನ್ನಪಟ್ಟಣ ತಾಲೂಕಿನ 5 ಜಿ.ಪಂ. ವ್ಯಾಪ್ತಿಯಲ್ಲಿ ಕಾರ್ಯ ಕರ್ತರ ಸಭೆ ನಡೆಸಿದ ಅವರು, ನಾನು ನಿಮ್ಮ ಮನೆ ಮಗ, ನೀವು ಹಾಲಾದರೂ ಕೊಡಿ, ವಿಷವಾದರೂ ಕೊಡಿ. ಕ್ಷೇತ್ರದ ಶಾಸಕನಾಗಿ ನಾನು ಒಳ್ಳೆಯ ಕೆಲಸ ಮಾಡಿದ್ದರೆ, ಗೆಲ್ಲಿಸಿಕೊಡಿ ಎಂದರು.

ನಾನು ಕ್ಷೇತ್ರಕ್ಕೆ ಬರದೇ ಹೋದರೂ ನನ್ನನ್ನು ಎರಡು ಬಾರಿ ಗೆಲ್ಲಿಸಿದ್ದೀರಿ. ನಾನು ನಿಮಗೆ ದ್ರೋಹ ಮಾಡಿಲ್ಲ, ಜಾತಿ, ಮತ, ಪಕ್ಷಭೇದ ತೊರೆದು ಕೆಲಸ ಮಾಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಈ ಉಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಆಶೀರ್ವದಿಸಿ ಎಂದು ಮನವಿ ಮಾಡಿದರು.

ಇನ್ನೊಂದು ವಾರದಲ್ಲಿ ಅಭ್ಯರ್ಥಿ ಫೈನಲ್
ಚನ್ನಪಟ್ಟಣ ಉಪ ಚುನಾವಣೆ ಯಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರನ್ನೇ ಕಣಕ್ಕಿಳಿಸಬೇಕು, ಇಲ್ಲೇ ಘೋಷಣೆ ಮಾಡಿ ಎಂದು ಕಾರ್ಯಕರ್ತರು ಆಗ್ರಹಿಸಿದರು. ಇನ್ನೊಂದು ವಾರದಲ್ಲಿ ಘೋಷಣೆ ಮಾಡುವುದಾಗಿ ಕುಮಾರಸ್ವಾಮಿ ತಿಳಿಸಿದರು.

2028ಕ್ಕಿಂತ ಮೊದಲೇ ರಾಜ್ಯ ಸರಕಾರ ಪತನ: ಎಚ್‌ಡಿಕೆ ಭವಿಷ್ಯ
ರಾಜ್ಯ ಸರಕಾರದ ಕೌಂಟ್‌ ಡೌನ್‌ ಪ್ರಾರಂಭವಾಗಿದೆ. ಮುಂದಿನ ಚುನಾವಣೆಗೆ 2028ರ ವರೆಗೆ ಕಾಯಬೇಕಿಲ್ಲ. ಬಹುಶಃ ಅದಕ್ಕಿಂತ ಮೊದಲೇ ಬರಲಿದೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರ ಸ್ವಾಮಿ ಭವಿಷ್ಯ ನುಡಿದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next