Advertisement

ಎಂಜಿಎಂ ಕಾಲೇಜಿನ ಅಧ್ಯಾಪಕರಾಗಿದ್ದ ಪ್ರೊ ಬಿ ಬಾಲಚಂದ್ರ ಇನ್ನಿಲ್ಲ

12:24 PM Aug 09, 2020 | keerthan |

ಉಡುಪಿ: ಇಲ್ಲಿನ ಎಂಜಿಎಂ ಕಾಲೇಜಿನಲ್ಲಿ ಎರಡು ದಶಕಗಳಿಗೂ ಮೀರಿ ಇತಿಹಾಸ ವಿಭಾಗದಲ್ಲಿ ಅಧ್ಯಾಪಕರು, ವಿಭಾಗ ಮುಖ್ಯಸ್ಥರು ಆಗಿ ನಿವೃತ್ತರಾಗಿದ್ದ ಪ್ರೊ ಬಿ ಬಾಲಚಂದ್ರ (83) ಅವರು ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಶನಿವಾರ ನಿಧನ ಹೊಂದಿದರು.

Advertisement

ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿದ ಅವರು ನಂತರ ಕಾಲೇಜು ಅಧ್ಯಾಪಕತನಕ್ಕೆ ಬೇಕಾದ ಅರ್ಹತೆಯನ್ನು ಗಳಿಸಿಕೊಂಡರು ಅಧ್ಯಾಪಕರಾಗಿ ಜನಪ್ರಿಯರಾಗಿದ್ದ ಬಾಲಚಂದ್ರ ಅವರು ಎನ್ಎಸ್ಸಿ ಅಧಿಕಾರಿಯಾಗಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು. ಯಕ್ಷಗಾನ, ನಾಟಕ ಇತ್ಯಾದಿ ಕಾರ್ಯಕ್ರಮಗಳ ನಿರ್ವಹಣೆಯಲ್ಲಿ ಸಕ್ರಿಯರಾಗಿದ್ದರು.

ಅವರು ಪತ್ನಿ ಪ್ರೇಮ, ಮಕ್ಕಳಾದ ಪಂಜದಲ್ಲಿ ವೈದ್ಯರಾಗಿರುವ ಡಾಕ್ಟರ್ ಕೃಷ್ಣಮೂರ್ತಿ, ವಿದೇಶದಲ್ಲಿ ಇಂಜಿನಿಯರ್ ಆಗಿರುವ ಕೇಶವ ಕುಮಾರ್, ಹಾಗೂ ಬೆಂಗಳೂರಿನಲ್ಲಿ ಫಾರ್ಮಸಿ ಕಾಲೇಜಿನಲ್ಲಿ ಅಧ್ಯಾಪನ ನಡೆಸುತ್ತಿದ್ದ ಸರೋಜಾ ಅವರನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next