Advertisement

ಪ್ರಾರಬ್ಧಗಳನ್ನು ಸುಲಭವಾಗಿ ನಿವಾರಿಸಿಕೊಳ್ಳುವ ಬಗೆ ಹೀಗೆ

10:47 AM Feb 04, 2017 | |

ಹೋಮ ಹವನಾದಿಗಳು ಅನುಷ್ಠಾನಗಳು ಉತ್ತಮ ಫ‌ಲಿತಾಂಶಗಳ ಬಗೆಗೆ ಶಕ್ತಿದಾಯಕ ಉತ್ಸಾಹ ತುಂಬಲು ಮಂತ್ರಪಠಣಗಳು ಧ್ಯಾನ ಸ್ತುತಿ ಪೂಜೆ ಇತ್ಯಾದಿಗಳು ಬೆಂಬಲ ಕೊಡುವ ವಿಚಾರ ಸರಿ. ಜಾತಕದಲ್ಲಿನ ದೋಷ ನಿವಾರಣೆಗೆ ಇವೆಲ್ಲಾ ಇದೆಯೆಂಬುದು ನಿಜ. ಆದರೆ ಕೆಲವು ಸರಳ ಉಪಾಯಗಳು ನಿಮ್ಮಲ್ಲಿ ದೋಷಗಳ ವಿರುದ್ಧ ಒಂದು ಪ್ರಭಾ ನಿಯಂತ್ರಣವನ್ನು ಸಾಧಿಸಬಲ್ಲವು. ದೇವರು ಹೇಗಿದ್ದಾನೆ? ಎಲ್ಲಿದ್ದಾನೆ ಎಂಬುದರ ಬಗ್ಗೆ ತೀವ್ರವಾಗಿ ತಲೆ ಕೆಡಿಸಿಕೊಳ್ಳದಿರಿ. ದೈವೀ ಶಕ್ತಿ ಇದೆ ಎಂಬುದನ್ನು ನಂಬಿ ಹೆಜ್ಜೆ ಇಡಿ. ನಿಮ್ಮ ನಂಬಿಕೆ ದೇವರಲ್ಲಿ ಸರ್ವಸ್ವ ಸಮರ್ಪಣಾ ಮನೋಭಾವದಿಂದ ಪ್ರಾರ್ಥಿಸಿ ಮನಸ್ಸಿಗೆ ಶಾಂತಿ ಸಮಾಧಾನ ನೀಡುವಂತೆ ಆತ್ಮ ಪ್ರಾಮಾಣ್ಯದಿಂದ ನಮಸ್ಕರಿಸಿ. ಶಾಂತ ಸ್ಥಳ ಮತ್ತು ಆವರಣದಲ್ಲಿ ದೇವರೊಂದಿಗೆ ನಡೆಸುವ ಸಂಭಾಷಣೆ ಪ್ರಾರ್ಥನೆ ಅಸಾಧ್ಯವಾದುದನ್ನು ಸಾಧಿಸಿಕೊಡುವ ಶಕ್ತಿ ವಲಯವನ್ನು ನಿರ್ಮಿಸುತ್ತದೆ. ನೀವು ಇದನ್ನು ನಂಬಿ. ಆಪಧ್ಯಾನಕ್ಕೆ ಯಾವತ್ತೂ ಈ ಶಕ್ತಿ ಇದೆ.

Advertisement

ನಿಮ್ಮ ವ್ಯಕ್ತಿತ್ವ ಶುದ್ಧವಾಗಿರಲಿ
ಸಾಮಾಜಿಕ ಜೀವನದಲ್ಲಿ ನಾಗರೀಕತೆ ಶಾಪವಾಗುವ ಭೀತಿ ಇದ್ದರೂ ಅನಾಗರೀಕತೆ ದೈವವನ್ನು ಸ್ಪಂದಿಸಲಾರದು. ನೀವು ಉತ್ತಮ ನಾಗರೀಕರಾಗಬೇಕು. ಯಾವುದೇ ಕುರೂಪಗಳಿದ್ದರೂ ಮುಖದ ಸೌಂದರ್ಯ ಒಂದೇ ವರ್ಚಸ್ಸು ತೂಕವನ್ನು ಹೆಚ್ಚಿಸದು. ನಿಮ್ಮ ತಾಳ್ಮೆ ಸಂಯಮ ನಯನಯ ವ್ಯವಧಾನಗಳು ನಿಮ್ಮನ್ನು ಇತರರ ನಡುವೆ ಶೋಭೆಗೆ ಕಾರಣವಾಗುವ ಶಕ್ತಿ ನೀಡಿ ಮಿಂಚಿಸುತ್ತದೆ. ಅಬ್ದುಲ್‌ ಕಲಾಂ ಬರ್ನಾಡ್‌ ಷಾ ಅಬ್ರಹಾಂ ಲಿಂಕನ್‌ ಇತ್ಯಾದಿ ಇತ್ಯಾದಿ ಜನ ತಮ್ಮ ಸೌಂದರ್ಯದಿಂದ ಮಿಂಚಿದ್ದಲ್ಲ. ಅನನ್ಯವಾದ ಜಾnನ ವಿನಯ ಕರ್ತವ್ಯ ತತ್ಪರತೆಗಳಿಂದ ಕೋಟಿಗಟ್ಟಲೆ ಜನರನ್ನು ಸ್ಪಂದಿಸಿದ್ದಾರೆ. ಇವರುಗಳ ಉತ್ಸಾಹ ಚೈತನ್ಯಗಳೇ ಇವರನ್ನು ತುಂಬಿದ ಕೊಡಗಳನ್ನಾಗಿಸಿದೆ. ಇದರ ಅರ್ಥ ಸೌಂದರ್ಯ ಮೋಹಕ ರೂಪ ಪಡೆದವರೆಲ್ಲ ಶುದ್ಧ ವ್ಯಕ್ತಿತ್ವದವರಲ್ಲ ಎಂದು ಅರ್ಥವಲ್ಲ. ಒಟ್ಟಿನಲ್ಲಿ ವ್ಯಕ್ತಿತ್ವಕ್ಕೆ ಒಂದು ಘನತೆ ಇದ್ದರೆ ಎತ್ತರಕ್ಕೆ ಏರಬಹುದು. ಪಡಿಪಾಟಲುಗಳನ್ನು ದಾಟಿ ಆದರ್ಶ ಜೀವಿಗಳಾಗಬಹುದು.

ಮಾತು, ವಾಕ್‌ ಚಾತುರ್ಯ, ಸಂವಹನಾ ಕಲೆ ಎಲ್ಲಾ ಪ್ರತಿಭೆಗಳಿದ್ದೂ ಮಾತಿನ ನೈಪುಣ್ಯ ಸಂವೇದನೆಗಳನ್ನು ತೆರೆದಿಡುವ ಸಂವಹನಾ ಕಲೆ ಇತರರು ನಿಮ್ಮ ಬಗ್ಗೆ ನಂಬಿಕೆ ತಾಳುವಂತೆ ಮಾತನಾಡುವ ಕಲೆಗಾರಿಕೆಯಿಂದ ನೀವು ಮೇಲೇರಬಲ್ಲಿರಿ. ಬರೀ ಬಂಡವಾಳರದ ಬಡಾಯಿಗಳಿಂದ ಫ‌ಲವಿಲ್ಲ. ತೋಳ ಬಂತೆಂದೇ ತೋಳದ ಕತೆ ನಿಮಗೆಲ್ಲ ಆಗೊತ್ತಿದೆ. ಇಂದಿನ ಜಗತ್ತು ಮಾತನ್ನು ನಂಬುತ್ತದೆ. ನಂಬುವಂತೆ ಮಾತಾಡಿ ಸುಳ್ಳಾಡಿದವರನ್ನು ಕಸದ ಬುಟ್ಟಿಗೆ ಎಸೆಯುತ್ತದೆ. ( ಇದರಲ್ಲಿ ಭಾರತದ ರಾಜಕೀಯ ಒಂದು ಅಪವಾದವಾವಿದೆ. ಇಲ್ಲಿ ಜಾತಿ ಧರ್ಮದ ಬಗೆಗಿನ ವಿಚಾರಗಳು ನಮ್ಮೆಲ್ಲರ ಆತ್ಮಗಳಲ್ಲಿ ಭೂತಗಳು ಸಂಚರಿಸುವ ಹೆದ್ದಾರಿಗಳ ನಿರ್ಮಾಣವಾಗುವ ಸಂದರ್ಭಗಳನ್ನು ನಿರ್ಮಿಸಿದೆ) ಧೈರ್ಯಂ ಸರ್ವತ್ರ ಸಾಧನಂ ಧೈರ್ಯ ಬೇಕು ಆದರೆ ಭಂಡ ಧೈರ್ಯ ಬೇಡ. ಧೈರ್ಯ ಸಾಹಸಗಳಿಂದ ಸ್ಥೈರ್ಯ ಏಕಾಗ್ರತೆಗಳಿಂದ ಗ್ರಹಗಳ ವೈಪರೀತ್ಯಗಳನ್ನು ನಿಯಂತ್ರಿಸಬಹುದು. ಆತ್ಮ ವಿಶ್ವಾಸ ಅತಿಯಾದ ಆತ್ಮ ವಿಶ್ವಾಸಗಳ ನಡುವೆ ಕೂದಲೆಳೆ ಅಂತರ ಅಷ್ಟೆ. ಸ್ವಾಭಿಮಾನ ದುರಭಿಮಾನಗಳ ನಡುವೆಯೂ ಅಷ್ಟೇ. ವ್ಯಕ್ತಿತ್ವ ಶುದ್ಧಿ ಮಾತಿನ ಚಾತುರ್ಯ ಸಂವಹನಾ ಶಕ್ತಿಯ ಬಲದಿಂದ ಸಮತೋಲನ ಪೂರ್ಣ ಧೈರ್ಯ ಸಂಪಾದಿಸಬಹುದು.

ವಿದ್ಯೆ, ವಿಜ್ಞಾನ ಪರರಿಂದ ಕೇಳಿ ತಿಳಿಯುವ ಶ್ರದ್ಧೆ ಇರಲಿ
ವಿದ್ಯೆ ವಿಜಾnನಗಳು ವ್ಯವಹಾರಿಕ ಕೌಶಲ್ಯಗಳು ತನ್ನ ಒಳಿತಿಗಾಗಿ ಇನ್ನೊಬ್ಬನನ್ನು ತುಳಿಯದ ಧರ್ಮಾಧರ್ಮ ವಿವೇಚನೆಗಳಿದ್ದರೆ ಪರರಿಂದ ಉತ್ತಮವಾದುದನ್ನು ತಿಳಿಯುವ ಉತ್ಸಾಹ ಒಳ್ಳೆಯ ಮನಸ್ಸು ಇದ್ದರೆ ನಮ್ಮ ಸಂಬಂಧವಾದ ಜಾತಕದ ದೋಷಗಳು ನಿವಾರಣೆ ಆಗುತ್ತದೆ. ಹರಿಹರರೇ ನಮ್ಮ ವಿರುದ್ಧವಾಗಿ ನಿಂತರೂ ನಮಗೆ ಜಾnನ ಒದಗಿಸುವ ಗುರು ನಮ್ಮನ್ನು ಕಾಪಾಡುತ್ತಾನೆ. ಗಾಡ್‌ ಫಾದರ್‌ ಎಂಬ ಶಬ್ಧ ಈ ಅರ್ಥದ ಬೆಳಕಿನಲ್ಲಿ ನೋಡುವಂತಾಗಲಿ. ತಾಯಿಯೂ ನಮ್ಮಗುರು. 

ಪೂರ್ವ ಪುಣ್ಯ ನಮ್ಮನ್ನು ರಕ್ಷಿಸುತ್ತದೆ
ನಾವು ಹಿಂದಿನ ಜನ್ಮದಲ್ಲಿ ಮಾಡಿದ ಸುಧರ್ಮ ನಮ್ಮನ್ನು ಈ ಜನ್ಮದಲ್ಲಿ ಕಾಯುವ ವಜಾÅಯುಧವಾಗುತ್ತದೆ. ನಮ್ಮ ಸಂಸ್ಕಾರವು ಹೊಳೆಯುವ ಚಿನ್ನದ ಅದಿರುಗಳಾಗಿ ನಮ್ಮ ವ್ಯಕ್ತಿತ್ವವನ್ನು ಕಾಪಾಡುತ್ತದೆ. ಜಾnನ, ಆತ್ಮ ಪರಮಾತ್ಮರ ಸಂಬಂದಗಳ ಬಗೆಗಿನ ನಮ್ಮ ಮಂಥನ ಒಳಿತಿಗೆ ಕೊಂಡೊಯ್ಯುತ್ತದೆ. ಮನುಷ್ಯನೂ ಒಂದು ಪ್ರಾಣಿ. ಆದರೆ ಬೇರೆಯಾಗಿ ನಿಂತು ನಾವು ಶ್ರೇಷ್ಠರಾಗುವುದೇ ದೈವಸಿದ್ಧಿ. ಸಂಕಲ್ಪ ನಮಗೆ ನ್ಯಾಯಾನ್ಯಾಯಗಳ ಬಗ್ಗೆ ವಿವೇಚನೆ ನೀಡಿರುವುದರಿಂದ ವಿದ್ವಾನ್‌ ಸರ್ವತ್ರ ಪೂಜ್ಯತೆ ಎಂಬ ಮಾತು ನೆನಪಿಸಿಕೊಳ್ಳಿ. ಎದುಬದುರಾದ ಕನ್ನಡಿಗಳು ಸತ್ಯ. ಆದರೆ ಅವುಗಳ ಒಳಗಿನ ಅನಂತಾನಂತ ಪ್ರತಿಫ‌ಲನಗಳು ನಮಗೆ ಸತ್ಯವಾಗುವುದು ನಮ್ಮ ನಂಬಿಕೆಯಿಂದ. ದೇವರೂ ಹಾಗೆಯೇ ಅವನ ಬಗೆಗಿನ ನಮ್ಮ ನಂಬಿಕೆ ನಮ್ಮನ್ನು ಕಾಪಾಡುತ್ತದೆ. ಕಾಣದಿದ್ದರೂ ಆ ಶಕ್ತಿ ಇದ್ದೇ ಇದೆ. ನಮ್ಮ ಮಕ್ಕಳನ್ನು ಸಂಸ್ಕಾರಪೂರ್ಣರನ್ನಾಗಿಸಿದರೆ ಇಳಿ ವಯಸ್ಸಿನಲ್ಲಿ ನಮ್ಮನ್ನವರು ಕಾಪಾಡುತ್ತಾರೆ. 

Advertisement

ಮಾನಸಿಕ ದಾರಿದ್ರ್ಯದಿಂದ ಹೊರಬನ್ನಿ
ಮಾನಸಿಕ ದಾರಿದ್ರ್ಯದಿಂದ ಹೊರಬರಲು ಸಾಧ್ಯವಿದೆ. ಧರ್ಮ, ಅರ್ಥ, ಕಾಮ, ಮೋಕ್ಷಗಳಿಂದ ನಾವು ದಾರಿದ್ರ್ಯ ಅನುಭವಿಸಲು ಸಾಧ್ಯವೇ ಇಲ್ಲ. ಧರ್ಮ ಸರಿಯಾದ ಸೂಕ್ತ ಶ್ರಮ ಇದರಿಂದ ಬರುವ ದ್ರವ್ಯ ನಿರಾಯಾಸವಾದ ಬಿಡುಗಡೆಗೆ ದಾರಿ ಒದಗಿಸುತ್ತದೆ. ಪೊಲೀಸ್‌ ಕೋರ್ಟ್‌ ಇತ್ಯಾದಿ ನಮಗೆ ಬೇಕಾಗಿಯೇ ಇಲ್ಲ. ನಾವು ಮನುಷ್ಯರಾದರೆ ರೌಡಿಗಳು ವಂಚಕರು, ಕೇಡಿಗಳು, ಕೊಲೆ ದರೋಡೆಗಾರರು ಇರಲಾರರು. ಅಪರಾಧಮುಕ್ತ ಸಮಾಜವಿದ್ದರೆ ಜಾತಕದ ಯಾವ ಬಾಧೆಗಳು ನಮ್ಮನ್ನು ಸಂತೋಷದಿಂದ ವಿಮುಖ ಗೊಳಿಸಲಾರವು. 

ಮದುವೆ ಎಂಬ ಮೃದು ಬಂಧನಕ್ಕೆ ದಾರಿಯಾಗಲಿ
ಋಣಾನುಬಂಧ ರೂಪೇಣ ಪಶುಪತ್ನಿ ಸುತಾಲಯ -ಬಾಳ ಸಂಗಾತಿಯದ್ದು ಎಲ್ಲವೂ ನಿರಾಳ. ಬಾಳ ಸಂಗಾತಿಯ ಜೊತೆಗೆ ಕದನ, ಮುನಿಸು, ತರ್ಕ, ಜಟಾಪಟಿ ಇದ್ದರೆ ಬಾಳು ಹಾಳು. ಮನೆಯ ಒಳಗಿನ ಶಾಂತಿ ಧನಲಾಭವನ್ನು ಆರೋಗ್ಯ ಸಂವರ್ಧನೆಯನ್ನು ಸಂಸ್ಕಾರಪೂರ್ಣವಾದ ರಸಮಯ ಸಂಧಾನದ ದಾರಿಯನ್ನು ಎತ್ತರಕ್ಕೆ ಏರಿಸಿ ಜೀವನವನ್ನು ಗೆಲ್ಲಿಸಬಲ್ಲದು. ಇದೇ ಇಲ್ಲದಿದ್ದರೆ ಎಲ್ಲವೂ ಶೂನ್ಯ. ಧಮಾರ್ಥ ಕಾಮ ಮೋಕ್ಷಗಳ ಮುಖ್ಯ ಬಿಂದುವೇ ಕಾಮ. ಆದರೆ ಕಾಮ ಕೃತವಾಗಬಾರದು. ಹೆಣ್ಣೂ ಗಂಡು ಪಾರ್ವತಿ ಪರಮೇಶ್ವರರ ಸ್ವರೂಪ. ಪ್ರಕೃತಿ ಪುರುಷರ ಸಂಯೋಜಕ ಸ್ವರೂಪ. ಆದರೆ ಹೆಚ್ಚು ತಿಂದರೆ ಅಜೀರ್ಣ. ತಿನ್ನದಿದ್ದರೆ ಬಸವಳಿಕೆ. ಜೀವನಕ್ಕೆ ಅರ್ಥವಿಲ್ಲ. ಪಾಲಿಗೆ ಬಂದದ್ದು ಪಂಚಾಮೃತ. ಬಾಳ ಸಂಗಾತಿಯೊಡನೆ ಅರಿತು ನಡೆಯಿರಿ. ಜಾಗತಿಕ ಹಿಂಸೆಗೆ ಮೂಲಕಾರಣ ಮನೆಯೊಳಗಿನ ಅಶಾಂತಿ. ಈ ಅಶಾಂತಿ ಹೊರಗೆ ಬಂದು ಬವಣೆ ನಿರ್ಮಾಣ. ಮನೆಯ ಹೊರಗಿನ ಒತ್ತಡ ಮನೆಯ ಒಳಗಡೆ ತರಬೇಡಿ. ಇದರಿಂದ ಅಶಾಂತಿಗೆ ದಾರಿ. ಪ್ರತಿ ಮನೆಯೂ ನಂದನವನವಾಗಲಿ. ಜಗತ್ತೇ ಒಂದು ಕುಟುಂಬ ಎಂಬ ಮಾತು ಸತ್ಯ.

ಮುಂದಿನ ವಾರ ಬಹು ಮುಖ್ಯವಾದ ಮರಣ ಆಯಸ್ಸು ಕ್ಲೇಷ. ಯಾತನೆ ಭಾಗ್ಯ, ಉದ್ಯೋಗ ಸಿದ್ಧಿ ಉದ್ಯೋಗ, ಸಂತೃಪ್ತಿ ಲಾಭ, ಆಸ್ತಿ ಪ್ರಾಪ್ತಿ ಸಂಪ್ರಾಪ್ತಿ ನಷ್ಟ ಬವಣೆ ಜಡತ್ವ ಬೇಸರ ಮುಕ್ತಿ ವೈರಾಗ್ಯ ಸ್ಥಾನ ಥರದ ಸ್ಥಿತಿಗತಿ ಇತ್ಯಾದಿಗಳ ಬಗ್ಗೆ ತಿಳಿದುಕೊಳ್ಳೋಣ. ಈ ಅಂಕಣದಲ್ಲಿ ಈ ಎಲ್ಲಾ ಮೇಲಿನ ವಿಚಾರಗಳನ್ನು ಗಮನಿಸಿ ಹೆಜ್ಜೆ ಇರಿಸಿ. ಆಗ ನಿಮ್ಮ ಜಾತಕದ ಬವಣೆಗಳನ್ನು ಸರಳವಾಗಿ ಎದುರಿಸಬಹುದು. ಭಾಗ್ಯವು ದೈವ ಕೃಪೆಯಿಂದಲೇ ಒದಗಬೇಕು. ಮೋಕ್ಷವೂ ದೈವ ಕೃಪಯಿಂದಲೇ ಸಿಗಬೇಕು. ಹೀಗಾಗಿ ಪರಮಾತ್ಮನಿಗೆ ಶರಣಾಗಿ. ನಿನಗೆ ಶರಣಾಗುವುದರ ವಿನಾ ಬೇರೆ ಮಾರ್ಗವಿಲ್ಲ ಎಂಬ ನಿಮ್ಮ ಮಾತು ದೈವ ಶಕ್ತಿಗೆ ಕೇಳುವಂತಾದರೆ ಆಗ ಎಲ್ಲವೂ ಚೆನ್ನ. ನಿಮ್ಮನ್ನು ನೀವು ಗೌರವಿಸಿ. ಆದರೆ ಸ್ವಾರ್ಥಿಯಾಗುತ್ತ ಸಾಧಿಸಬೇಡಿ. ಸ್ವಾರ್ಥದಿಂದ ನೀವೇ ನಿಮ್ಮನ್ನು ಗೌರವಿಸಲಾಗದು.

ಅನಂತ ಶಾಸ್ತ್ರಿ 

Advertisement

Udayavani is now on Telegram. Click here to join our channel and stay updated with the latest news.

Next