Advertisement

ರಾಯ್‌ಬರೇಲಿ ಮೇಲಿನ ಸೋನಿಯಾ ಭಕ್ತಿ ಅನುಕರಣೀಯ: ಪ್ರಿಯಾಂಕಾ ಗಾಂಧಿ

09:58 AM Apr 12, 2019 | Team Udayavani |

ಹೊಸದಿಲ್ಲಿ : ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಲು ಇಂದು ನಾಮಪತ್ರ ಸಲ್ಲಿಸಿರುವ ತನ್ನ ತಾಯಿ ಸೋನಿಯಾ ಗಾಂಧಿ ಅವರು ತನ್ನ ಕ್ಷೇತ್ರಕ್ಕೆ ಹಾಗೂ ಕ್ಷೇತ್ರದ ಜನಸೇವೆಗೆ ತೋರಿರುವ ಭಕ್ತಿ ಮತ್ತು ಶ್ರದ್ಧೆಯನ್ನು ಪ್ರತಿಯೋರ್ವ ರಾಜಕಾರಣಿಯೂ ಕಲಿಯಬೇಕಾಗಿದೆ ಎಂದು ಮಗಳು ಪ್ರಿಯಾಂಕಾ ಗಾಂದಿ ವಾದ್ರಾ ಟ್ವೀಟ್‌ ಮಾಡಿದ್ದಾರೆ.

Advertisement

ರಾಜಕಾರಣದ ನಿಜವಾದ ಅರ್ಥ ಸಮರ್ಪಣಾ ಭಾವದ ಜನಸೇವೆ. ಇದನ್ನು ಎಲ್ಲ ರಾಜಕಾರಣಿಗಳು ನನ್ನ ತಾಯಿಯಿಂದ ಕಲಿಯಬೇಕಾಗಿದೆ ಮತ್ತು ಜನಸೇವೆಗೆ ದೊರಕಿರುವ ಅವಕಾಶಕ್ಕಾಗಿ ಎಲ್ಲ ರಾಜಕಾರಣಿಗಳು ದೇಶದ ಜನರಿಗೆ ಚಿರ ಋಣಿಗಳಾಗಿರಬೇಕಾಗಿದೆ ಎಂದು ಪ್ರಿಯಾಂಕಾ ಬರೆದಿದ್ದಾರೆ.

ಪ್ರಿಯಾಂಕಾ ಅವರು ತನ್ನ ಈ ಟ್ವೀಟ್‌ ಜತೆಗೆ ತಾಯಿ ಸೋನಿಯಾ ಗಾಂಧಿ ನಿರ್ವಚನಾಧಿಕಾರಿಯ ಮುಂದೆ ನಾಮಪತ್ರ ಸಲ್ಲಿಸುತ್ತಿರುವ ಫೋಟೋ ಕೂಡ ಅಪ್‌ಲೋಡ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next