Advertisement

Goa ಪೊಂಡಾದಲ್ಲಿ ವಿದ್ಯಾರ್ಥಿಗಳೊಂದಿಗೆ ಬೆರೆತ ರಾಷ್ಟ್ರಪತಿ ಮುರ್ಮು

07:00 PM Aug 24, 2023 | Team Udayavani |

ಪಣಜಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಮೂರು ದಿನಗಳ ಗೋವಾ ಪ್ರವಾಸದಲ್ಲಿದ್ದು, ಇದೇ ವೇಳೆ ಗುರುವಾರ ಗೋವಾದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಹೊರಡುವಾಗ ಪೊಂಡಾದಲ್ಲಿ ವಿದ್ಯಾರ್ಥಿಗಳನ್ನು ನೋಡಿ ಏಕಾಏಕಿ ತಮ್ಮ ಬೆಂಗಾವಲು ವಾಹನವನ್ನು ನಿಲ್ಲಿಸಿದರು. ವಿದ್ಯಾರ್ಥಿಗಳೊಂದಿಗೆ ಬೆರೆಯಲು ಮುಂದಾದರು.

Advertisement

ಅಧ್ಯಕ್ಷ ಮುರ್ಮು ಪೊಂಡಾದ ಜಿವಿಎಂ ಕಾಲೇಜಿಗೆ ಭೇಟಿ ನೀಡಿದರು. ನೇರವಾಗಿ ಕ್ಯಾಂಪಸ್‍ಗೆ ಆಗಮಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಮೊದಲಿಗೆ ಕೆಲವು ವಿದ್ಯಾರ್ಥಿಗಳು ನೇರವಾಗಿ ಅವರೊಂದಿಗೆ ಮಾತನಾಡಲು ಸಂಕೋಚಪಟ್ಟರು. ಆದರೆ ನಂತರ ಹಿಂದಿನಿಂದ ಬಂದ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ವಿದ್ಯಾರ್ಥಿಗಳನ್ನು ತಮ್ಮ ಬಳಿಗೆ ಕರೆದರು. ಈ ವೇಳೆ ಕೆಲವರು ಫೋಟೋ ಕೂಡ ಕ್ಲಿಕ್ಕಿಸಿಕೊಂಡರು.

ಭಾರತದ ರಾಷ್ಟ್ರಪತಿಗಳು ಬೆಂಗಾವಲು ಪಡೆ ನಿಲ್ಲಿಸಿ ಅವರೇ ವಿದ್ಯಾರ್ಥಿಗಳೊಂದಿಗೆ ಬೆರೆಯುತ್ತಿರುವುದನ್ನು ಕಂಡು ವಿದ್ಯಾರ್ಥಿಗಳೂ ಮುಗಿಬಿದ್ದರು. ವಿದ್ಯಾರ್ಥಿಗಳೊಂದಿಗೆ ಹರಟೆ ಹೊಡೆಯುತ್ತಾ ಮುರ್ಮು ಕ್ಯಾಡ್ಬರಿಸ್ ಚಾಕಲೇಟ್ ಅನ್ನು ವಿದ್ಯಾರ್ಥಿಗಳಿಗೆ ಹಂಚಿದರು. ರಾಷ್ಟ್ರಪತಿಗಳನ್ನು ಭೇಟಿಯಾದ ವಿದ್ಯಾರ್ಥಿಗಳು ತುಂಬಾ ಉತ್ಸುಕರಾಗಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ರವರೊಂದಿಗೆ ಗೋವಾ  ರಾಜ್ಯಪಾಲಪಿಎಸ್ ಶ್ರೀಧರನ್ ಪಿಳ್ಳೈ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next