Advertisement

ಲಾಲು ಪ್ರಸಾದ್‌ ಯಾದವ್‌ ಏಮ್ಸ್‌ ಸ್ಥಳಾಂತರಕ್ಕೆ ಸಿದ್ಧತೆ

03:21 PM Mar 22, 2018 | udayavani editorial |

ರಾಂಚಿ : ಇಲ್ಲಿನ ವೈದ್ಯಕೀಯ ಸಮಿತಿಯಸಭೆಯಲ್ಲಿ, ಬಹುಕೋಟಿ ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಲಾಲು ಪ್ರಸಾದ್‌ ಯಾದವ್‌ಗೆ ಅಗತ್ಯವಿರುವ ಉತ್ತಮ ಚಿಕಿತ್ಸೆಯನ್ನು ಕೊಡಿಸುವುದಕ್ಕಾಗಿ ಏಮ್ಸ್‌ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಶಿಫಾರಸು ಮಾಡಲಾಗಿರುವ ಕಾರಣ ಲಾಲು ಅವರನ್ನು ದಿಲ್ಲಿ ಏಮ್ಸ್‌ಗೆ  ಒಯ್ಯುವುದಕ್ಕೆ ಸಿದ್ಧತೆ ನಡೆಸಲಾಗುತ್ತಿದೆ.

Advertisement

ಲಾಲು ಪ್ರಸಾದ್‌ ಯಾದವ್‌ ಗೆ ಹೃದಯ ಬೇನೆ, ಮಧುಮೇಹ ಮತ್ತು ಮೂತ್ರ ಪಿಂಡಗಳ ಸಮಸ್ಯೆ ಇದೆ. ಶಸ್ತ್ರಚಿಕಿತ್ಸೆ ಪಡೆಯುವುದಕ್ಕಾಗಿ ತಮ್ಮನ್ನು ದಿಲ್ಲಿಯ ಏಮ್ಸ್‌ಗೆ ಕರೆದೊಯ್ಯಬೇಕೆಂದು ಲಾಲು ಖುದ್ದಾಗಿ ಬಯಸಿದ್ದರು. 

ಆದರೆ ಈಗ ಲಾಲುಗೆ ಯಾವುದೇ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲವೆಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಆದರೂ ಅವರನ್ನು ಹೆಚ್ಚಿನ ಉತ್ತಮ ಚಿಕಿತ್ಸೆಗಾಗಿ ಏಮ್ಸ್‌ಗೆ ಸ್ಥಳಾಂತರಿಸುವ ಸಿದ್ಧತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next