Advertisement

Ullal: ಸರ್ವೇ ಕಾರ್ಯ ಮುಗಿದ ಕೂಡಲೇ ಫಲಾನುಭವಿಗಳಿಗೆ ನಿವೇಶನ ಲಭ್ಯ

11:44 AM Jul 30, 2024 | Team Udayavani |

ಉಳ್ಳಾಲ: ಹರೇಕಳ ಗ್ರಾಮದ ಮಲಾರ ಬಳಿ 15 ವರ್ಷಗಳ ಹಿಂದೆ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟಿರುವ ಜಮೀನನ್ನು ಗ್ರಾಮದ ವಸತಿ ರಹಿತರಿಗೆ ರಾಜೀವ ಗಾಂಧಿ ವಸತಿ ಯೋಜನೆಯಡಿ ಹಂಚಲು ಮಂಜೂರು ಮಾಡಿದ್ದು, ಇದೀಗ ಸರ್ವೇ ಕಾರ್ಯ ಮುಗಿದ ಕೂಡಲೇ ಸಂಬಂಧಪಟ್ಟ ಇಲಾಖೆಯ ಮೂಲಕ ಅಭಿವೃದ್ಧಿಪಡಿಸಿ ಫಲಾನುಭವಿಗಳಿಗೆ ಹಂಚಲು ಕ್ರಮ ಕೈಗೊಳ್ಳಲಾಗುವುದು ಎಂದು ಉಳ್ಳಾಲ ತಾಲೂಕು ತಹಶೀಲ್ದಾರ್‌ ಪುಟ್ಟರಾಜು ಹೇಳಿದರು.

Advertisement

ಹರೇಕಳ ಗ್ರಾಮ ಪಂಚಾಯತ್‌ನಲ್ಲಿ ಜನಪ್ರತಿ ನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹರೇಕಳ ಗ್ರಾಮದ ಮಲಾರ್‌ ಮತ್ತು ರಾಜುಗುಡ್ಡೆ ಪ್ರದೇಶದಲ್ಲಿ ವಸತಿ ಯೋಜನೆಗಾಗಿ ಮೀಸಲಿಟ್ಟ ಜಮೀನಿನ ಮಾಹಿತಿ ಪಡೆದ ಬಳಿಕ ಮಲಾರ ಬಳಿಯಿರುವ ಜಮೀನು ಪರಿಶೀಲನೆ ನಡೆಸಿ ಮಾತನಾಡಿದ ಅವರು ಈಗಾಗಲೇ ಗ್ರಾಮದಲ್ಲಿ 400ಕ್ಕೂ ಹೆಚ್ಚು ವಸತಿ ರಹಿತರ ಅರ್ಜಿ ಸಲ್ಲಿಕೆಯಾಗಿದ್ದು, ಸರ್ವೇ ಬಳಿಕ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆಯಾಗಲಿದೆ. ಪಂಚಾಯತ್‌ನ ಜನಪ್ರತಿನಿಧಿಗಳ ಮುತು ವರ್ಜಿಯಿಂದ ಈ ಕಾರ್ಯ ಸಂಪನ್ನ ಗೊಂಡಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯತ್‌ ಅಧ್ಯಕ್ಷೆ ಗುಲಾಬಿ, ಮಾಜಿ ಅಧ್ಯಕ್ಷೆ ಅನಿತಾ ಡಿ’ಸೋಜಾ, ಅಭಿವೃದ್ಧಿ ಅಧಿಕಾರಿ ಮುತ್ತಪ್ಪ ಡಿ., ಕಾರ್ಯದರ್ಶಿ ತಾರಾಕ್ಷಿ, ಸದಸ್ಯರಾದ ಅಬ್ದುಲ್‌ ಸತ್ತಾರ್‌ ನ್ಯೂಪಡ್ಪು, ಅಬೂಬಕ್ಕರ್‌ ಸಿದ್ದಿಕ್‌, ಅನೀಸ್‌, ತಾಲೂಕು ಕಂದಾಯ ನಿರೀಕ್ಷಕ ಪ್ರಮೋದ್‌, ಗ್ರಾಮಕರಣಿಕೆ ಅಕ್ಷತಾ ಮೊದಲಾದವರು ಉಪಸ್ಥಿತರಿದ್ದರು.

9.50 ಎಕ್ರೆ ಜಮೀನು ಮೀಸಲು
ಹರೇಕಳ ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಅಬ್ದುಲ್‌ ಮಜೀದ್‌ ಎಂ.ಪಿ. ಮಾತನಾಡಿ, ಈಗಾಗಲೇ ಕೆಲವು ಸಂಘಟನೆಗಳು ನಿವೇಶನಕ್ಕಾಗಿ ಪ್ರತಿಭಟನೆ ನಡೆಸಿವೆ. ನಿವೇಶನ ರಹಿತರಿಗೆ ಪಂಚಾಯತ್‌ ಈಗಾಗಲೇ 9.50 ಎಕ್ರೆ ಜಮೀನು ಮೀಸಲಿಡಲಿಟ್ಟಿದ್ದು, ಗಡಿ ಗುರುತಿಗಾಗಿ ಸರ್ವೇಯರ್‌ ಬಂದಿದ್ದಾರೆ. ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆ ಶೀಘ್ರ ಈಡೇರಲಿದೆ ಎಂದು ತಿಳಿಸಿದರು.

ಸರ್ವೇ ಬಳಿಕ ಅರ್ಹರ ಪಟ್ಟಿ ತಯಾರಿ
ನಿವೇಶನ ಸಮಿತಿ ಅಧ್ಯಕ್ಷ ಬದ್ರುದ್ದೀನ್‌ ಫರೀದ್‌ ನಗರ ಮಾತನಾಡಿ, ನಿವೇಶನ ವಿಚಾರ ಪ್ರತೀ ಗ್ರಾಮಸಭೆಯಲ್ಲೂ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಹರೇಕಳ ಎಲ್ಲ ವಿಚಾರದಲ್ಲೂ ಮೊದಲ ಸ್ಥಾನದಲ್ಲಿದೆ. ಮೀಸಲು ಜಮೀನು ಸರ್ವೇ ಆದ ಬಳಿಕ ಅರ್ಹರ ಪಟ್ಟಿ ತಯಾರಿಸಲಾಗುತ್ತದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next