Advertisement

ಪ್ರಣವಶ್ರೀ ಗೌರವ ಪ್ರದಾನ

08:48 PM Apr 05, 2019 | Team Udayavani |

ಪ್ರಣವ ಸ್ಕೂಲ್‌ ಆಫ್ ಮ್ಯೂಸಿಕ್‌ ಅಂಡ್‌ ಫೈನ್‌ ಆರ್ಟ್ಸ್ನ ವಾರ್ಷಿಕೋತ್ಸವ “ವಸಂತ ಕುಕಿಲು’ ಪ್ರಯುಕ್ತ, ಕಲಾಕ್ಷಿತಿ ಕಲಾ ಸಂಸ್ಥೆಯ ನಿರ್ದೇಶಕ ನಾಟ್ಯಾಚಾರ್ಯ ಡಾ. ಎಂ.ಆರ್‌. ಕೃಷ್ಣಮೂರ್ತಿ ಅವರಿಗೆ “ಪ್ರಣವಶ್ರೀ’ ಗೌರವ ಪ್ರದಾನ ಮತ್ತು ಗುರುವಂದನೆ ಹಮ್ಮಿಕೊಳ್ಳಲಾಗಿದೆ. ಆಕಾಶವಾಣಿ ಕಾರ್ಯಕ್ರಮಗಳ ಸಹ ನಿರ್ದೇಶಕ ಎನ್‌. ರಘು, ಸಂಗೀತ ಸಂಯೋಜಕ ನಿಖೀಲ್‌ ಕುಮಾರ್‌, ನಟ ಅಮಿತ್‌ರಾವ್‌, ರೇಡಿಯೋ ಜಾಕಿ ರಜಸ್‌, ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ನಂತರ, ಸಂಸ್ಥೆಯ ವಿದ್ಯಾರ್ಥಿಗಳಿಂದ “ಚಕ್ರ’ ವಿಶೇಷ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.

Advertisement

ಎಲ್ಲಿ?: ಶ್ರೀಪಾದ ಶ್ರೀವಲ್ಲಭ ಭವನ, ತ್ಯಾಗರಾಜನಗರ 3ನೇ ಬ್ಲಾಕ್‌
ಯಾವಾಗ?: ಏ.7, ಭಾನುವಾರ ಮಧ್ಯಾಹ್ನ 3

Advertisement

Udayavani is now on Telegram. Click here to join our channel and stay updated with the latest news.

Next