Advertisement

“ನೊಂದವರಿಗೆ ಸ್ಪಂದಿಸಬಲ್ಲ ರಾಜಕಾರಣಿ ಪ್ರಮೋದ್‌’ 

07:15 AM May 08, 2018 | Team Udayavani |

ಉಡುಪಿ: ಪ್ರಮೋದ್‌ ಮಧ್ವರಾಜ್‌ ರಾಜಕಾರಿಣಿ ಮಾತ್ರವಲ್ಲ, ನೊಂದವರಿಗೆ ಸ್ಪಂದಿಸಬಲ್ಲ ಹೃದಯವಂತ ಶಾಸಕರೂ ಹೌದು. ವೈಯಕ್ತಿಕ ಗಳಿಕೆಯನ್ನೂ ಕಷ್ಟದಲ್ಲಿರುವವರ ಬದುಕಿಗಾಗಿ ವಿನಿಯೋಗಿಸುವ ಮಾನವೀಯತೆಯುಳ್ಳವರು. ಸರಕಾರದ ಸವಲತ್ತುಗಳೊಂದಿಗೆ ದಾನಿಗಳಿಂದಲೂ ಬಡವರ ಬದುಕಿಗೆ ನೆರವಾಗುವ ಸಾಮಾಜಿಕ ಹೊಣೆಗಾರಿಕೆ ಸಾಧಿಸಿದವರು. ಸರಕಾರದ ವಸತಿ ಸೌಕರ್ಯದೊಂದಿಗೆ ದಾನಿಗಳೇ ಕಟ್ಟಿಕೊಟ್ಟ ನೂರಕ್ಕೂ ಹೆಚ್ಚು ಮನೆಗಳನ್ನು ಒದಗಿಸಿಕೊಟ್ಟವರು ಎಂದು ಜಿಲ್ಲಾ ಕಾಂಗ್ರೆಸ್‌ ಪ್ರ.ಕಾರ್ಯದರ್ಶಿ ಬಿ. ನರಸಿಂಹಮೂರ್ತಿ ಬಣ್ಣಿಸಿದರು.
  
ಬೀಡಿನಗುಡ್ಡೆಯಲ್ಲಿ ನಡೆದ ಕಾಂಗ್ರೆಸ್‌ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಸರಕಾರದ 34 ಇಲಾಖಾಧಿಕಾರಿಗಳನ್ನು ಸೇರಿಸಿ ಜನರಿಂದ ಅಹವಾಲುಗಳನ್ನು ಸ್ವೀಕರಿಸಿ, ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿಯೇ ಕಾನೂನಿನ ತೊಡಕಿಲ್ಲದ ಸಮಸ್ಯೆಗಳನ್ನು ಪರಿಹರಿಸುವ ಪ್ರಮೋದ್‌ರ ಕಾರ್ಯ ವೈಖರಿವೊಂದು ನೂತನ ಹಾಗೂ ದೇಶದಲ್ಲಿಯೇ ಪ್ರಥಮ. ಉಡುಪಿ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸಲು ನಿರಂತರ ಶ್ರಮವಹಿಸಿದ್ದಾರೆ. ಈ ನಿಟ್ಟಿನಲ್ಲಿ ಮುಂಬರುವ ಚುನಾವಣೆಯಲ್ಲಿ ಪ್ರಮೋದ್‌ ಮಧ್ವರಾಜ್‌ರಿಗೆ ಮತ ನೀಡುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನೀವೆಲ್ಲರೂ ಕಾರಣರಾಗಬೇಕೆಂದು ಮನವಿ ಮಾಡಿದರು. ಬ್ಲಾಕ್‌ ಅಧ್ಯಕ್ಷ ಸತೀಶ್‌ ಅಮೀನ್‌ ಪಡುಕರೆ, ಕೆಪಿಸಿಸಿ ಪ್ರ.ಕಾರ್ಯದರ್ಶಿ ಎಂ.ಎ. ಗಫ‌ೂರ್‌, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಸಭೆ ಸದಸ್ಯರಾದ ರಮೇಶ್‌ ಕಾಂಚನ್‌, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್‌ ಪುತ್ರನ್‌, ವಕ್ತಾರ ಭಾಸ್ಕರ್‌ ರಾವ್‌ ಕಿದಿಯೂರ್‌, ಶೇಖರ್‌ ಜಿ. ಕೋಟ್ಯಾನ್‌, ಜನಾರ್ದನ ಭಂಡಾರ್ಕಾರ್‌, ಕೆ. ಗೋಪಾಲ, ಚಂದ್ರಮೋಹನ್‌ ಉಪಸ್ಥಿತರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next