Advertisement

ಪ್ರಮೋದ್‌ ಮಧ್ವರಾಜ್‌ಗೆ ಸಂಪುಟ ಸ್ಥಾನಮಾನ: ಹರ್ಷ

11:30 AM Sep 02, 2017 | |

ಉಡುಪಿ: ಮೊದಲ ಬಾರಿಗೆ ಉಡುಪಿಯ ಶಾಸಕರಾಗಿ ಆಯ್ಕೆಯಾದ ಸಂದರ್ಭದಲ್ಲೇ ಸಚಿವ ಸ್ಥಾನ ಪಡೆದಿದ್ದ ಪ್ರಮೋದ್‌ ಮಧ್ವರಾಜ್‌ ಅವರಿಗೆ ಸಂಪುಟ ಸ್ಥಾನಮಾನ ದೊರಕಿದ್ದು, ಉಡುಪಿ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

ಉಡುಪಿ ಜಿಲ್ಲೆಯಾದ್ಯಂತ ವಿಶೇಷವಾಗಿ ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರು ಸಚಿವ ಪ್ರಮೋದ್‌ ಅವರ ಭಡ್ತಿಗೆ ಸಂಸತ ವ್ಯಕ್ತಪಡಿಸಿದ್ದಾರೆ.

ಶಾಸಕನಾಗಿ ನಾಲ್ಕು ವರ್ಷಗಳಲ್ಲಿ ನಾಲ್ಕು ತರಹದ ಭಡ್ತಿಗಳು ನನಗೆ ಸಿಕ್ಕಿದೆ. ಸಂಸದೀಯ ಕಾರ್ಯದರ್ಶಿ ಯಾಗಿ, ಸಹಾಯಕ ಸಚಿವನಾಗಿ, ಸಂಪುಟ ಸಚಿವನಾಗಿ ಕಾರ್ಯನಿರ್ವಹಿಸುವ ಅವಕಾಶ ದೊರಕಿದೆ.

ಈ ನಾಲ್ಕೂ ಹಂತಗಳಲ್ಲಿ ಮುಖ್ಯಮಂತ್ರಿಗಳು, ಪಕ್ಷದ ವಿವಿಧ ಜವಾಬ್ದಾರಿಗಳನ್ನು ಹೊತ್ತಿರುವ ನಾಯಕರು, ಕಾರ್ಯಕರ್ತರು ವಿಶೇಷವಾಗಿ ಸಹಕಾರ  ನೀಡಿದ್ದಾರೆ. ಪ್ರಾಮಾಣಿಕ ಸೇವೆಗೆ ಸಂದ ಮನ್ನಣೆ ಇದಾಗಿದೆ ಎಂದು ಪ್ರಮೋದ್‌ ಪ್ರತಿಕ್ರಿಯಿಸಿದ್ದಾರೆ.ಇನ್ನಷ್ಟು ಉತ್ತಮ ಮತ್ತು ಪ್ರಾಮಾಣಿಕ ಸೇವೆ ಸಲ್ಲಿಸಲು ಅವಕಾಶವಾಗಿದೆ. ಪಕ್ಷ ಮತ್ತು ಜನರ ಆಶೋತ್ತರ ಈಡೇರಿಸಲು ಗರಿಷ್ಠ ಪ್ರಯತ್ನ ನಡೆಸುತ್ತೇನೆ ಎಂದಿದ್ದಾರೆ.   

Advertisement

Udayavani is now on Telegram. Click here to join our channel and stay updated with the latest news.

Next