Advertisement

ಕಾಂಗ್ರೆಸ್ ಗೆ ರಾಜಿನಾಮೆ ನೀಡಿದ್ದ ಪ್ರಭಾಕರ ಚಿಣಿ ಫೆ.15ರಂದು ಬಿಜೆಪಿ ಸೇರ್ಪಡೆ

05:23 PM Feb 14, 2023 | Team Udayavani |

ಕುಷ್ಟಗಿ: ಕಳೆದ ಸೋಮವಾರ ಕಾಂಗ್ರೆಸ್ ಪ್ರಾಥಮಿಕ‌ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದ ನಿವೃತ್ತ ಪ್ರಧಾನ ಇಂಜಿನೀಯರ್ ಪ್ರಭಾಕರ ಚಿಣಿ ಅವರು ತಮ್ಮ ಬೆಂಬಲಿಗರೊಂದಿಗೆ ಫೆ.15ರಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಸಮ್ಮುಖದಲ್ಲಿ ಬಿಜೆಪಿ ಸೇರಲಿದ್ದಾರೆ.

Advertisement

ಕುಷ್ಟಗಿ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಪ್ರಭಾಕರ ಚಿಣಿ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಕಡೆಗಾಣಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದರು. ಇವರೊಂದಿಗೆ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಪರಶುರಾಮ್ ನಾಗರಾಳ, ಪುರಸಭೆ ಕಾಂಗ್ರೆಸ್ ಸದಸ್ಯ ವಸಂತ‌‌ ಮೇಲಿನಮನಿ, ಪುರಸಭೆ ಪಕ್ಷೇತರ ಸದಸ್ಯ ಅಂಬಣ್ಣ ಭಜಂತ್ರಿ, ಆಶೋಕ ಬಳೂಟಗಿ, ಶಂಕರಯ್ಯ ಕಂಪಾಪೂರಮಠ, ಯಲ್ಲಪ್ಪ ಗದ್ದಿ, ಸಯ್ಯದ್ ಅತ್ತಾರ, ಮಾನಪ್ಪ ಕಮ್ಮಾರ, ನಾಗರಾಜ ಭೋವಿ, ಎಪಿಎಂಸಿ ಮಾಜಿ ಅಧ್ಯಕ್ಷ ಸಂಗಪ್ಪ ಮೆಣಸಗೇರಿ ಮೊದಲಾದವರು ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ ಎಂಬುದು ಮೂಲಗಳು ಖಚಿತಪಡಿಸಿವೆ.

ಇದನ್ನೂ ಓದಿ: ಬಿಜೆಪಿ ಸರಕಾರ ಗೋವಾ ಮತ್ತು ಗೋವಾ ಜನರ ವಿರುದ್ಧ ಕೆಲಸ ಮಾಡುತ್ತಿದೆ: ವಿಜಯ್ ಸರ್ದೇಸಾಯಿ

Advertisement

Udayavani is now on Telegram. Click here to join our channel and stay updated with the latest news.

Next