Advertisement

Zameer Ahmed ವಿರುದ್ಧದ ಬಿಜೆಪಿ ಧರಣಿ ಮುಂದೂಡಿಕೆ

12:14 AM Dec 05, 2023 | Team Udayavani |

ಬೆಳಗಾವಿ: ತೆಲಂಗಾಣ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸ್ಪೀಕರ್‌ ಪೀಠದ ಬಗ್ಗೆ ಅಗೌರವಯುತ ಹೇಳಿಕೆ ನೀಡಿದ್ದ ಸಚಿವ ಜಮೀರ್‌ ಅಹ್ಮದ್‌ ವಿರುದ್ಧ ಸದನದಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಬಿಜೆಪಿ ಮುಂದೂಡಿದೆ.

Advertisement

ಸುವರ್ಣ ವಿಧಾನಸೌಧದಲ್ಲಿ ಈ ಬಗ್ಗೆ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿತ್ತು. ಸದನದಲ್ಲಿ ಸರಕಾರದ ವಿರುದ್ಧ ಹೋರಾಟ ನಡೆಸಲು ಪಟ್ಟಿ ಮಾಡಿದ್ದ 60 ಅಂಶಗಳಲ್ಲಿ ಈ ವಿಚಾರವೂ ಸೇರಿತ್ತು. ಆದರೆ ಸುವರ್ಣಸೌಧದಲ್ಲಿ ಅನಗತ್ಯ ಪ್ರತಿಭಟನೆ ಬೇಡ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಈಗಾಗಲೇ ಮಾಡಿರುವ ಮನವಿ ಹಿನ್ನೆಲೆಯಲ್ಲಿ ಮೊದಲ ದಿನವೇ ಪ್ರತಿಭಟನೆ ನಡೆಸದಿರಲು ಬಿಜೆಪಿ ನಿರ್ಧರಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next