Advertisement

PM Modi ಗೊಂದಲಗಳಿಲ್ಲದೆ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ : ಶಾ

04:26 PM Apr 06, 2023 | Team Udayavani |

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಗೊಂದಲಗಳಿಲ್ಲದೆ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಮತ್ತು ಅವುಗಳನ್ನು ಜಾರಿಗೊಳಿಸುವಾಗ ದೇಶದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.

Advertisement

ಶಾ ಅವರು ಗುಜರಾತ್‌ನ ಬೊಟಾಡ್ ಜಿಲ್ಲೆಯ ಸಲಾಂಗ್‌ಪುರ ಗ್ರಾಮದಲ್ಲಿ ಪ್ರಸಿದ್ಧ ಹನುಮಾನ್ ದೇವಸ್ಥಾನವಾದ ಶ್ರೀ ಕಷ್ಟಭಂಜನ್ ದೇವ್ ಮಂದಿರದಲ್ಲಿ ಹನುಮಾನ್ ಜಯಂತಿಯ ಸಂದರ್ಭದಲ್ಲಿ, ಹೊಸದಾಗಿ ನಿರ್ಮಿಸಲಾದ ಮೆಗಾ ಅಡುಗೆಮನೆಯನ್ನು ಉದ್ಘಾಟಿಸಿ ಮಾತನಾಡಿದರು.

ವಾರಾಣಸಿಯ ಕಾಶಿ ವಿಶ್ವನಾಥ ದೇವಸ್ಥಾನದ ನವೀಕರಣ ಸೇರಿದಂತೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವದ ಕೆಲವು ದೊಡ್ಡ ಯೋಜನೆಗಳನ್ನು ಶಾ ಉಲ್ಲೇಖಿಸಿದ್ದಾರೆ.

ಬಿಜೆಪಿ ರಚನೆಯಾದ ನಂತರ ಕೇವಲ ಎರಡು ಲೋಕಸಭಾ ಸ್ಥಾನಗಳನ್ನು ಗೆದ್ದಾಗ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ತಮಾಷೆ ಮಾಡಿದ್ದರು. ಆದರೆ ಈಗ ದೇಶದ 16 ರಾಜ್ಯಗಳಲ್ಲಿ ಬಿಜೆಪಿ ಸರಕಾರವಿದೆ ಮತ್ತು 400 ಕ್ಕೂ ಹೆಚ್ಚು ಸಂಸತ್ ಸದಸ್ಯರನ್ನು ಹೊಂದಿದೆ ಎಂದರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಭಾರತೀಯ ಸಂಸ್ಕೃತಿಗೆ ದೊಡ್ಡ ಉತ್ತೇಜನ ಸಿಕ್ಕಿತು ಮತ್ತು ಅದು ಪ್ರಪಂಚದಾದ್ಯಂತ ಜನಪ್ರಿಯವಾಯಿತು ಎಂದರು.

ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿಗಾಗಿ ಬಾಬರ್ ಕಾಲದಿಂದಲೂ ಲಕ್ಷಾಂತರ ಜನರು ತ್ಯಾಗ ಮಾಡಿದ್ದಾರೆ. ಪರಿಹಾರವನ್ನು ತರುವ ಬದಲು ಕಾಂಗ್ರೆಸ್ ಸಮಸ್ಯೆಯನ್ನು ವಿಸ್ತರಿಸುತ್ತಲೇ ಇತ್ತು. ಒಂದು ದಿನ, ನ್ಯಾಯಾಲಯದ ತೀರ್ಪು ಬಂದಿತು ಮತ್ತು ಮೋದಿಜಿ ರಾಮಮಂದಿರಕ್ಕೆ ಭೂಮಿಪೂಜೆ ಮಾಡಿದರು ಎಂದು ಶಾ ಹೇಳಿದರು.

Advertisement

370 ನೇ ವಿಧಿ ಮತ್ತು ರಾಮ ಜನ್ಮಭೂಮಿಯ ವಿಷಯಗಳನ್ನು ಮುಟ್ಟಿದರೆ ಗಲಭೆಗಳು ಸಂಭವಿಸುತ್ತವೆ ಎಂದು ಕೆಲವರು ಹೇಳುತ್ತಿದ್ದರು, ಆ ರೀತಿಯ ಏನೂ ಆಗಲಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next