Advertisement

ಶ್ರೀರಾಮ, ಶ್ರೀಕೃಷ್ಣರಂತೆ ಪಿಎಂ ಮೋದಿ ದೇವರ ಅವತಾರ: ಸಚಿವ ಕಮಲ್‌ ಪಟೇಲ್‌

07:35 PM Jan 18, 2022 | Team Udayavani |

ಭೋಪಾಲ: “ಶ್ರೀರಾಮ ಮತ್ತು ಶ್ರೀಕೃಷ್ಣ ಹೇಗೆ ದೇವರ ಅವತಾರವೋ, ಅದೇ ರೀತಿ ಪ್ರಧಾನಿ ನರೇಂದ್ರ ಮೋದಿಯವರೂ ದೇವರ ಅವತಾರವೇ ಆಗಿದ್ದಾರೆ. ಸದ್ಯ ದೇಶದಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ನಿವಾರಿಸಲು ಅವರು ಅವತರಿಸಿದ್ದಾರೆ’ ಎಂದು ಮಧ್ಯಪ್ರದೇಶದ ಕೃಷಿ ಸಚಿವ ಕಮಲ್‌ ಪಟೇಲ್‌ ಹೇಳಿದ್ದಾರೆ.

Advertisement

ಸೋಮವಾರ ಹರ್ದಾ ಎಂಬಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ದೇಶದಲ್ಲಿ ಸೃಷ್ಟಿಸಿದ ಭ್ರಷ್ಟಾಚಾರದ ನಾಶ, ಆ ಪಕ್ಷ ನಾಶಪಡಿಸಿದ ದೇಶದ ಸಂಸ್ಕೃತಿಯ ಪುನರುತ್ಥಾನಕ್ಕೆ ಮೋದಿಯವರು ಅವತಾರ ಎತ್ತಿದ್ದಾರೆ ಎಂದಿದ್ದಾರೆ.

ರಾಮಾವತಾರದಲ್ಲಿ ಶ್ರೀರಾಮ ರಾವಣನನ್ನು ಕೊಂದು ರಾಮರಾಜ್ಯ ಸಂಸ್ಥಾಪನೆ ಮಾಡಿದ್ದ. ಕೃಷ್ಣಾವತಾರದ ವೇಳೆ ಕಂಸ ಮತ್ತು ಇತರ ರಾಕ್ಷಸರನ್ನು ಕೊಂದು ಜಗತ್ತಿಗೆ ಕ್ಷೇಮ ತಂದಿದ್ದ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಬೋಗಸ್ ಹಾಜರಿ ಹಾಕಲು ಗ್ರಾಪಂ ಸದಸ್ಯರಿಂದಲೇ ಒತ್ತಡ: ಆಕ್ರೋಶ

Advertisement

Udayavani is now on Telegram. Click here to join our channel and stay updated with the latest news.

Next