Advertisement

ಭಾರತದ ಎಲ್ಲ ನಗರಗಳ ನಡುವೆ ಸೌಂದರ್ಯ ಸ್ಪರ್ಧೆ ನಡೆಯಲಿ: ಪ್ರಧಾನಿ ಮೋದಿ

07:56 PM Dec 17, 2021 | Team Udayavani |

ಲಕ್ನೋ: ಭಾರತದ ಎಲ್ಲ ನಗರಗಳ ನಡುವೆ ಸೌಂದರ್ಯದ ವಿಚಾರದಲ್ಲಿ ಸ್ಪರ್ಧೆ ಏರ್ಪಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಶುಕ್ರವಾರ ವರ್ಚುವಲ್‌ ವೇದಿಕೆಯಲ್ಲಿ ನಡೆದ ಅಖಿಲ ಭಾರತ ಮೇಯರ್‌ ಸಮಾವೇಶದಲ್ಲಿ ವಾರಾಣಸಿಯಿಂದ ಭಾಗವಹಿಸಿದ ಅವರು ಈ ಮಾತನ್ನಾಡಿದ್ದಾರೆ.

ಎಲ್ಲ ಮೇಯರ್‌ಗಳು ತಮ್ಮ ತಮ್ಮ ನಗರಗಳು ವಿಜೃಂಭಿಸುವಂತೆ ಮಾಡಬೇಕು. ಹಳೆಯದನ್ನು ಉಳಿಸಿಕೊಂಡೇ ಹೊಸತನ ಪರಿಚಯಿಸಬೇಕು.

ಹಾಗೆಯೇ ಆಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ ನಗರಗಳಲ್ಲಿ ನದಿ ಉತ್ಸವ, ಕವಿ ಸಮ್ಮೇಳನದಂತಹ ವಿಶೇಷ ಕಾರ್ಯಕ್ರಮ ನಡೆಸಬೇಕೆಂದು ಕರೆ ಕೊಟ್ಟರು.

ಇದೇ ವೇಳೆ, ಸ್ವಚ್ಛತೆ ಬಗ್ಗೆ ಗಮನ ಹರಿಸದ ನಗರಗಳನ್ನು ಪಟ್ಟಿ ಮಾಡಿ, ಅವುಗಳು ಸ್ವಚ್ಛತಾ ಅಭಿಯಾನ ಕೈಗೊಳ್ಳುವಂತೆ ಪ್ರೇರೇಪಿಸಲು ಮೋದಿಯವರು ಕೇಂದ್ರ ವಸತಿ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಸೂಚಿಸಿದರು.

Advertisement

ಸಮ್ಮೇಳನದಲ್ಲಿ ಒಟ್ಟು 120 ನಗರಗಳ ಮೇಯರ್‌ಗಳು ಭಾಗವಹಿಸಿದ್ದರು.

ಇದನ್ನೂ ಓದಿ:ಹಣಕ್ಕಾಗಿ ಒಡಹುಟ್ಟಿದ ತಂಗಿಯನ್ನೇ ಮದುವೆಯಾದ ಅಣ್ಣ!

Advertisement

Udayavani is now on Telegram. Click here to join our channel and stay updated with the latest news.

Next