Advertisement

ಇಲ್ಲಿ ಬೇಡ, ಇಟಲಿಗೆ ತೆರಳಿ ದುರ್ಬೋಧನೆ ಮಾಡಿ: ಯೋಗಿ ಕಿಡಿ

10:03 AM May 08, 2019 | Vishnu Das |

ಹೊಸದಿಲ್ಲಿ: ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಟಲಿಗೆ ತೆರಳಿ ನಿಂದಿಸುವುದನ್ನು ಹೇಳಿಕೊಡಲಿ , ಇಲ್ಲಿ ಬೇಡ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕಿಡಿ ಕಾರಿದ್ದಾರೆ.

Advertisement

ಮಂಡಾವಾಲಿ ಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ತೀವ್ರ ವಾಗ್ಧಾಳಿ ನಡೆಸಿದ ಯೋಗಿ, ಕಾಂಗ್ರೆಸ್‌ ಸಂಪೂರ್ಣವಾಗಿ ವಿಫ‌ಲವಾಗಿದೆ. ಶೆಹಜಾದಾ (ರಾಹುಲ್‌ ಗಾಂಧಿ )ವಿಫ‌ಲವಾದ ಕಾರಣ ಶೆಹಜಾದಿಯನ್ನು ಕರೆತಂದಿದ್ದಾರೆ. ಅವರು ಅಮೇಥಿಯ ಮಕ್ಕಳಿಗೆ ನಿಂದನೆ ಮಾಡುವುದನ್ನು ಹೇಳಿಕೊಡುತ್ತಿದ್ದಾರೆ. ಅವರು ಇಲ್ಲಿ ಹೇಳಿ ಕೊಡುವುದು ಬೇಡ, ದಯವಿಟ್ಟು ಇಟಲಿಗೆ ಹೋಗಿ ಹೇಳಿ ಕೊಡಲಿ ಎಂದರು.

ಅಮೇಥಿಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಎದುರು ಪುಟ್ಟ ಮಕ್ಕಳು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗುವ ವಿಡಿಯೋ ವೈರಲ್‌ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next