Advertisement

ನೀರಿನ ಸಮಸ್ಯೆ ತಡೆಗೆ ಸೂಚನೆ

03:57 PM Mar 26, 2021 | Team Udayavani |

ಮಂಡ್ಯ: ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಮುನ್ನವೇ ಮುಂಜಾಗ್ರತೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಎಸ್‌.ಅಶ್ವಥಿ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಜಿಲ್ಲೆಯ ಯಾವ ಹಳ್ಳಿಗಳಲ್ಲಿನೀರಿನ ಸಮಸ್ಯೆ ಇದೆ ಎಂದು ಗುರುತಿಸಿಸಮಸ್ಯೆಗಳಿಗೆ ಮುಂಚಿತವಾಗಿಯೇಪರಿಹಾರ ಕಂಡುಕೊಳ್ಳಬೇಕು ಎಂದರು.

ಹೈರಿಂಗ್‌ ವ್ಯವಸ್ಥೆ: ಖಾಸಗಿ ಬೋರ್‌ವೆಲ್‌ಗಳ ಬದಲಾಗಿ ಡಿಪೆನಿಂಗ್‌ ಅಥವಾ ಹೈರಿಂಗ್‌ಗಳತ್ತ ಗಮನ ಹರಿಸಬೇಕು. ಈ ವಿಧಾನಗಳುಸಾಧ್ಯವಾಗದಿದ್ದಲ್ಲಿ ಕನಿಷ್ಠ ಟ್ಯಾಂಕರ್‌ ವ್ಯವಸ್ಥೆಯನ್ನಾದರೂ ಮಾಡಬೇಕು. ರೈತರ ಜತೆ ಚರ್ಚಿಸಿ ಹೈರಿಂಗ್‌ ವ್ಯವಸ್ಥೆ ಮಾಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಪಿಎಸ್‌ ಅಳವಡಿಸಬೇಕು: ಸರ್ಕಾರದಸುತ್ತೋಲೆಯಲ್ಲಿರುವಂತೆ ಟ್ಯಾಂಕರ್‌ ನಿರ್ಮಾಣ ಮಾಡಬೇಕಾದರೆ ಕಡ್ಡಾಯವಾಗಿ ಜಿಪಿಎಸ್‌ ಅಳವಡಿಸಬೇಕು. ನಿಗದಿತವೇಳೆಯಲ್ಲಿ ಕೆಲಸ ನಿರ್ವಹಿಸುವಕಾರ್ಮಿಕರಿಗೆ ಸರಿಯಾದ ರೀತಿಯಲ್ಲಿವೇತನ ನೀಡಬೇಕು. ವೇತನ ನೀಡುವಲ್ಲಿಯಾವುದೇ ಸಮಸ್ಯೆ ಬಾರದಂತೆ ಕ್ರಮ ವಹಿಸಬೇಕು ಎಂದರು.

ಶಾಶ್ವತ ಪರಿಹಾರ: ಜಿಪಂಗೆ ಪ್ರತಿ ಗ್ರಾಮದನೀರಿನ ಸಮಸ್ಯೆಗಳ ಬಗ್ಗೆ ಹೆಚ್ಚಿನಅರಿವಿರುವುದರಿಂದ ಎಲ್ಲ ರೀತಿಯಸಮಸ್ಯೆಗಳನ್ನು ಗುರುತಿಸಿ ಶಾಶ್ವತ ಪರಿಹಾರಒದಗಿಸಬೇಕು. ಕೆ.ಆರ್‌.ಪೇಟೆ ತಾಲೂಕಿನಲ್ಲಿ 2 ವರ್ಷಗಳಿಂದ ನೀರಿನ ಸಮಸ್ಯೆ ಇದ್ದು, ಬೋರ್‌ವೆಲ್‌ಗ‌ಳಿಂದ ನೀರಿನ ಪೂರೈಕೆ ಮಾಡಲಾಗುತ್ತಿದೆ. ಅದಕ್ಕೆ ಶಾಶ್ವತ ಪರಿಹಾರ ಒದಗಿಸಲು ಗಮನಹರಿಸಬೇಕು ಎಂದು ತಿಳಿಸಿದರು.

Advertisement

ಜಾಗೃತಿ ಮೂಡಿಸಿ: ಜಿಲ್ಲೆಯ ನಗರ ಪ್ರದೇಶ, ಪುರಸಭೆ, ನಗರ ಸಭೆಗಳಂಥ ಪ್ರದೇಶಗಳಲ್ಲಿನೀರಿನ ಸಮಸ್ಯೆ ಕಡಿಮೆಯಿದೆ ಎಂದುಕಡೆಗಣಿಸುವಂತಿಲ್ಲ. ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಎಲ್ಲಿಯೂ ನೀರಿನ ಸಮಸ್ಯೆ ಬಾರದಂತೆ ಹಾಗೂ ನೀರಿನಮಿತಬಳಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ವಿ.ಆರ್‌.ಶೈಲಜಾ, ಜಿಪಂ ಉಪಕಾರ್ಯದರ್ಶಿ ಎನ್‌.ಡಿ.ಪ್ರಕಾಶ್‌, ಗ್ರಾಮೀಣ ಕುಡಿಯುವ ನೀರುಸರಬರಾಜು ಹಾಗೂ ನೈರ್ಮಲ್ಯ ವಿಭಾಗದಕಾರ್ಯಪಾಲಕ ಅಭಿಯಂತರ ಕುಮಾರ್‌,ಕೃಷಿ ಇಲಾಖೆಯ ಜಂಟಿ ನಿರ್ದೇಶಕಚಂದ್ರಶೇಖರ್‌, ಜಿಲ್ಲಾ ನಗರಾಭಿವೃದ್ಧಿಕೋಶದ ಆರ್‌.ಪ್ರತಾಪ್‌, ಜಿಲ್ಲಾಆರೋಗ್ಯಾ ಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ, ತಾಲೂಕು ಮಟ್ಟದ ಅಧಿ ಕಾರಿಗಳು ಸೇರಿದಂತೆ ಮತ್ತಿತರರಿದ್ದರು.

ಬೇಸಿಗೆ ಸಂಭವಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿಗೆಸಮಸ್ಯೆಯಾಗದಂತೆ ಮುಂಜಾಗ್ರತೆಕ್ರಮ ಕೈಗೊಳ್ಳಬೇಕು. ಸಮಸ್ಯೆಉಂಟಾಗುವ ಗ್ರಾಮಗಳಲ್ಲಿಟ್ಯಾಂಕರ್‌ ಅಥವಾ ಖಾಸಗಿಬೋರ್‌ವೆಲ್‌ಗ‌ಳಿಂದ ನೀರುಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಎಸ್‌.ಅಶ್ವಥಿ, ಜಿಲ್ಲಾಧಿಕಾರಿ, ಮಂಡ್ಯ

Advertisement

Udayavani is now on Telegram. Click here to join our channel and stay updated with the latest news.

Next