Advertisement

ಪಿಯಾ ಬೆಹ್ರುಪಿಯಾ

08:28 PM Feb 14, 2020 | Lakshmi GovindaRaj |

ಷೇಕ್ಸ್‌ ಪಿಯರ್‌ನ ರೊಮ್ಯಾಂಟಿಕ್‌ ಕಾಮಿಡಿ “ಟ್ವೆಲ್ತ್‌ ನೈಟ್‌’ನ ಅತ್ಯಂತ ಮನೋರಂಜಕ ರೂಪಾಂತರ­ವೆಂದು ಹೆಸರು ಪಡೆದಿದೆ. ರಂಗಶಂಕರದ ಹದಿನೈದನೇ ವರ್ಷಾಚರಣೆ ಪ್ರಯುಕ್ತ, ಸಂಗೀತಮಯ ಹಿಂದಿ ನಾಟಕದ ನಾಲ್ಕು ಪ್ರದರ್ಶನಗಳು ಆಯೋಜನೆಗೊಂಡಿವೆ.

Advertisement

ಅಮಿತೋಷ್‌ ನಾಗಾಲ್‌ ಇದನ್ನು ರಂಗರೂಪಕ್ಕೆ ತಂದಿದ್ದು, ಅತುಲ್‌ ಕುಮಾರ್‌ ನಿರ್ದೇಶಿಸಿದ್ದಾರೆ. “ದಿ ಕಂಪನಿ ಥಿಯೇಟರ್‌’ನ ಕಲಾವಿ­­ ದರು, ನಾಟಕವನ್ನು ಪ್ರದರ್ಶಿ­ಸಲಿದ್ದಾರೆ. ಅಮೋದ್‌ ಭಟ್‌, ಸಂಗೀತ ನೀಡಿದ್ದಾರೆ. ರಂಗಶಂಕರ ಬಾಕ್ಸ್‌ ಆಫೀಸ್‌ ಹಾಗೂ ಬುಕ್‌ ಮೈಶೋನಲ್ಲಿ ಟಿಕೆಟ್‌ಗಳು ಲಭ್ಯ.

ನಾಟಕದ ಕಲಾವಿದರು ಮತ್ತು ಸಂಗೀತಗಾರರು, ಈ ನಾಟಕದದಲ್ಲಿ ಬಳಸಿದ ರಂಗಗೀತೆಗಳನ್ನು ಮಕ್ಕಳಿಗೆ ಹೇಳಿಕೊಡುವ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದಾರೆ. ಶನಿ-ಭಾನುವಾರ ಬೆಳಗ್ಗೆ 11 ಗಂಟೆಗೆ ರಂಗಶಂಕರದಲ್ಲಿ ಈ ಕಾರ್ಯಾಗಾರ ನಡೆಯಲಿದೆ. 8-15 ವಯೋಮಾನದ ಮಕ್ಕಳು ಭಾಗವಹಿಸಬಹುದು. ಶನಿವಾರ ಬೆಳಗ್ಗೆ 10 ಗಂಟೆಗೆ ಹೆಸರು ನೋಂದಾಯಿಸಿಕೊಳ್ಳಬೇಕು.

ಎಲ್ಲಿ?: ರಂಗಶಂಕರ, 8ನೇ ಕ್ರಾಸ್‌, ಆರ್‌.ಕೆ. ಕಾಲೊನಿ, ಜೆ.ಪಿ ನಗರ
ಯಾವಾಗ?: ಫೆ. 15-16, ಮಧ್ಯಾಹ್ನ 3.30 ಮತ್ತು ಸಂಜೆ 7.30

Advertisement

Udayavani is now on Telegram. Click here to join our channel and stay updated with the latest news.

Next