Advertisement

ಫೋನ್‌ ಇನ್‌ ಕಾರ್ಯಕ್ರಮ ಸಹಕಾರಿ

03:14 PM Apr 12, 2021 | Team Udayavani |

ಮೂಡಲಗಿ: ಕ್ಲಿಷ್ಟಾಂಶಗಳನ್ನು ಸರಳೀಕರಿಸಿ, ನುರಿತ ಹಾಗೂ ಸಂಪನ್ಮೂಲ ಶಿಕ್ಷಕರುಗಳಿಂದ ಶೈಕ್ಷಣಿಕ ಸಮಸ್ಯೆ ಪರಿಹರಿಸಿ ಪರೀಕ್ಷೆಗಳನ್ನು ಎದುರಿಸಲು  ವಿನೂತವಾಗಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿಫೋನ್‌ ಇನ್‌ ಸಂವಾದ ಕಾರ್ಯಕ್ರಮವನ್ನು ತಾಲೂಕಾ ಹಂತಗಳಲ್ಲಿ ಜಾರಿಗೆ ತರಲಾಗಿದೆ ಎಂದು ಡಿಡಿಪಿಐ ಗಜಾನನ ಮನ್ನಿಕೇರಿ ಹೇಳಿದರು.

Advertisement

ಅವರು ನಗರದ ಬಿಇಒ ಕಾರ್ಯಾಲಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿಗಳಿಗೆ ´ಫೋನ್‌ ಇನ್‌ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,´ಫೋನ್‌ ಇನ್‌ ಸಂವಾದ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಿಗೆ ಸಂಶಯಗಳನ್ನು ನಿವಾರಿಸುವಲ್ಲಿ ಸಹಾಯಕವಾಗಿದೆ. ಇಂದು ಜರುಗಿದ ´ಫೋನ್‌ ಕಾರ್ಯಕ್ರಮದಲ್ಲಿ ಪ್ರತಿ ವಿಷಯದ 3 ಜನಸಂಪನ್ಮೂಲ ಶಿಕ್ಷಕರಿಂದ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶೆ„ಕ್ಷಣಿಕ ಜಿಲ್ಲೆ ಚಿಕ್ಕೋಡಿ ಅಷ್ಟೇಅಲ್ಲದೆ ಬೇರೆ ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳು ತಮ್ಮ ಸಂಶಯಗಳನ್ನು ಹೋಗಲಾಡಿಸಿಕೊಂಡರು. ಇನ್ನು ಮುಂದೆ ವಿದ್ಯಾರ್ಥಿಗಳು ತಮಗಿರುವ ಕ್ಲಿಷ್ಟಾಂಶಗಳನ್ನು ಸಂಬಂಧಿ ಸಿದ ವಿಷಯಸಂಪನ್ಮೂಲ ಶಿಕ್ಷಕರಿಂದ ಪರಿಹರಿಸಿಕೊಳ್ಳಬೇಕುಎಂದು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ ಎಂದು ಹೇಳಿದರು.

ಶೆ„ಕ್ಷಣಿಕ ಜಿಲ್ಲೆಯ ಎಸ್‌.ಎಸ್‌.ಎಲ್‌.ಸಿ ಪರೀಕ್ಷಾ ನೋಡಲ್‌ ಅಧಿಕಾರಿ ಅರಿಹಂತ ಬಿರಾದಾರಪಾಟೀಲ ಮಾತನಾಡಿ, ಬ್ಲೂಪ್ರಿಂಟ್‌, ಮಾದರಿ ಪ್ರಶ್ನೆಪತ್ರಿಕೆ, ರದ್ದು ಪಡಿಸಿದ ಅಧ್ಯಾಯ, ಬಹು ಆಯ್ಕೆಪ್ರಶ್ನೆಗಳು, ಅನ್ವಯಿಕ ಪ್ರಶ್ನೆಗಳು, ಹೆಚ್ಚು ಅಂಕಗಳಿಸುವ ಬಗೆ, ಸಮಯ ನಿರ್ವಹಣೆ, ಪರೀಕ್ಷೆಯಖಚಿತತೆ, ನೂರರಷ್ಟು ಅಂಕ, ಪಾಸಿಂಗ್‌ ಪ್ಯಾಕೇಜ್‌, ಪರೀಕ್ಷೆ ಗೊಂದಲಗಳ ಕುರಿತು ವಿದ್ಯಾರ್ಥಿಗಳು ಫೋನ್‌ ಇನ್‌ ಸಂವಾದ ಕಾರ್ಯಕ್ರಮದಲ್ಲಿ ಪರಿಸಿಕೊಂಡಿದ್ದಾರೆ ಎಂದು ವಿವರಿಸಿದರು.

ಮೂಡಲಗಿ ಬಿಇಒ ಅಜಿತ ಮನ್ನಿಕೇರಿ ಮಾತನಾಡಿದರು. ಎಸ್‌.ಎಸ್‌.ಎಲ್‌.ಸಿ ಪರೀûಾತಾಲೂಕಾ ನೋಡಲ್‌ ಅ ಕಾರಿ ಹಾಗೂ ಇಸಿಒಸತೀಶ ಬಿ.ಎಸ್‌, ಸಂಪನ್ಮೂಲ ಶಿಕ್ಷಕರಾದ ಎಮ್‌.ಟಿದಡ್ಡಿಮನಿ, ಮತ್ತುರಾಜ ಬಂಬಲವಾಡ, ಯು.ಬಿದಳವಾಯಿ, ಎಸ್‌.ಆರ್‌ ಬೆಳಗಲಿ, ಮೋಹನತುಪ್ಪದ, ಎನ್‌.ಡಿ ನಿಡೋಣಿ, ಬಿ.ಡಿ ವಗ್ಗನವರ,ಎಸ್‌.ಸಿ ಅರಗಿ, ಎಸ್‌.ಪಿ ಕಬ್ಬೂರಮಠ, ವೈ.ಎನ್‌ಲಕ್ಕಿಕೊಪ್ಪ, ಸಿದ್ದು ವಾಲಿಮರದ, ಎ.ಕೆ ತರಾಳೆ, ಎಸ್‌.ಎಸ್‌ ಬಳ್ಳೂರಗಿ ಎಲ್‌.ಕೆ ಹೊಸಮನಿ, ಎಮ್‌.ಆರ್‌ ಕುಂಬಾರ, ಅಡವಯ್ಯ ಅಡವಿಸ್ವಾಮಿಮಠ, ಎಸ್‌.ಪಿ ಕಬ್ಬುರಮಠ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next