Advertisement

ಪೇಜಾವರಶ್ರೀ ಸೇರಿದಂತೆ ಅಷ್ಠ ಮಠಾಧೀಶರ ವಿರುದ್ಧ ದಾವೆ; ಏನಿದು ವಿವಾದ

04:56 PM Jan 30, 2017 | Team Udayavani |

ಉಡುಪಿ:ಪೇಜಾವರ ಮಠಾಧೀಶರಾದ ಪೇಜಾವರಶ್ರೀ ಸೇರಿಂದಂತೆ ಅಷ್ಠ ಮಠಾಧೀಶರ ವಿರುದ್ಧ ಪೇಜಾವರ ಮಠದ ಮಾಜಿ ಕಿರಿಯ ಮಠಾಧೀಶ ವಿಶ್ವವಿಜಯ ಸ್ವಾಮೀಜಿ ಅವರು ನಗರದ ಸಿವಿಲ್ ಕೋರ್ಟ್ ನಲ್ಲಿ ಸೋಮವಾರ ದಾವೆ ಹೂಡಿದ್ದಾರೆ.

Advertisement

ಲಿಖಿತ ಸಂವಿಧಾನ ಇಲ್ಲದ ಕಾರಣ ಪರ್ಯಾಯೋತ್ಸವ ಸಂದರ್ಭದಲ್ಲಿ ಗೊಂದಲಗಳಾಗುತ್ತಿದೆ. ಹಾಗಾಗಿ ಸಂಪ್ರದಾಯ ಕ್ರೋಡಿಕರಿಸಿ ಲಿಖಿತ ಸಂವಿಧಾನ ರಚನೆಯಾಗಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ. ನಾನು 1980ರ ದಶಕದಲ್ಲಿ ಸಾಗರೋಲ್ಲಂಘನೆ ಮಾಡಿದ್ದ ಸಂದರ್ಭದಲ್ಲಿ, ಪೀಠ ತ್ಯಾಗ ಮಾಡಿದ್ದೆ. ಆದರೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಸಾಗರೋಲ್ಲಂಘನೆ ಮಾಡಿದ್ದರು. ಆದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ಇದಕ್ಕಾಗಿಯೇ ಅಷ್ಠ ಮಠದಲ್ಲಿ ಲಿಖಿತ ಸಂವಿಧಾನ ಇದ್ದರೆ, ಈ ರೀತಿ ಮಾಡಲು ಸಾಧ್ಯವಿಲ್ಲ. ಅಲ್ಲದೇ ಅಷ್ಠ ಮಠಾಧೀಶರಲ್ಲಿ ಸಾಮರಸ್ಯ ಕಾಪಾಡಲು ಸಂವಿಧಾನ ರಚಿಸಬೇಕು. ಲಿಖಿತ ಸಂವಿಧಾನ ಇಲ್ಲದೇ ಇರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ಸ್ವಾಮೀಜಿ ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next