Advertisement

ನಟಿ ಕಾವ್ಯಾ ತಾಯಿ,ಅಣ್ಣನಿಗೆ ದುಷ್ಕರ್ಮಿಗಳ ಜೀವ ಬೆದರಿಕೆ 

11:15 AM Dec 08, 2017 | Team Udayavani |

ಶಿವಮೊಗ್ಗ : ದಯಾನಂದ ಸ್ವಾಮೀಜಿ ಜೊತೆ ರಾಸಲೀಲೆಯಲ್ಲಿ ಭಾಗಿಯಾಗಿ ಭಾರೀ ಸುದ್ದಿಯಾಗಿದ್ದ ನಟಿ ಕಾವ್ಯ ಆಚಾರ್ಯ ತಾಯಿ ಮತ್ತು ಸಹೋದರನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ ಘಟನೆ ಗುರುವಾರ ರಾತ್ರಿ ನಡೆದಿದೆ. 

Advertisement

ತೀರ್ಥಹಳ್ಳಿಯ  ಶಿವರಾಜಪುರ ಬಳಿ  ಹೆದ್ದಾರಿಯಲ್ಲಿ  ಕಾವ್ಯಾ ಅವರ ತಾಯಿ ನಾಗರತ್ನ ಮತ್ತು ಸಹೋದರ ಕೃಷ್ಣಾ ಅವರು ತೆರಳುತ್ತಿದ್ದ ಕಾರನ್ನು ಮಾರುತಿ ಆಮ್ನಿಯಲ್ಲಿ ಬಂದ ಐವರು ದುಷ್ಕರ್ಮಿಗಳು ಅಡ್ಡಗಟ್ಟಿ ಜೀವ ಬೆದರಿಕೆ ಹಾಕಿ ಕೃಷ್ಣ ಮೇಲೆ ಚೂರಿಯಿಂದ ಇರಿದು ಹಲ್ಲೆ ನಡೆಸಿದ್ದಾರೆ. 

ನಾಗರತ್ನ ಅವರು ಜೋರಾಗಿ ಕಿರುಚ್ಚಿದ್ದರಿಂದ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಇದೀಗ ಕೃಷ್ಣ ಅವರು ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಎಲ್ಲಿಯಾದರು ಕೋರ್ಟು ಕೇಸ್‌ , ಕಂಪ್ಲೆಂಟ್‌ ಅಂತ ಹೊದ್ರೆ ಇಡೀ ಕುಟುಂಬ ನಾಶವಾಗುತ್ತೆ ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. 

ಮಂಗಳೂರಿನಿಂದ ಇಬ್ಬರು ವಾಪಾಸಾಗುತ್ತಿದ್ದ ವೇಳೆ ಅಡ್ಡಗಟ್ಟಲಾಗಿದ್ದು, ಈ ಬಗ್ಗೆ ತಿಳಿದಿರುವವರೇ ಕೃತ್ಯ ಎಸಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. 

Advertisement

ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 

ಯಲಹಂಕದ ಹುಣಸಮಾರನಹಳ್ಳಿಯಲ್ಲಿರುವ ಶತಮಾನಗಳಷ್ಟು ಇತಿಹಾಸ ಹೊಂದಿರುವ ಮದ್ದೇವಣಾಪುರ ಮಹಾದೇವ ಸಂಸ್ಥಾನ ಮಠದ ಉತ್ತರಾಧಿಕಾರಿ ಎಂದು ಬಿಂಬಿತವಾಗಿದ್ದ ಗುರುನಂಜೇಶ್ವರ ಸ್ವಾಮೀಜಿ  ನಟಿ ಕಾವ್ಯಾ ಅವರೊಂದಿಗೆ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋ ಬಹಿರಂಗವಾಗಿ ಭಾರೀ ಸದ್ದು ಮಾಡಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next