Advertisement

Pepperfry ಸಹ ಸಂಸ್ಥಾಪಕ ಅಂಬರೀಶ್ ಮೂರ್ತಿ ಹೃದಯ ಸ್ತಂಭನದಿಂದ ನಿಧನ

12:11 PM Aug 08, 2023 | Team Udayavani |

ನವದೆಹಲಿ: ಆನ್‌ ಲೈನ್ ಪೀಠೋಪಕರಣ ಮಳಿಗೆ ಪೆಪ್ಪರ್‌ ಫ್ರೈ ಸಹ-ಸಂಸ್ಥಾಪಕ ಅಂಬರೀಶ್ ಮೂರ್ತಿ ಸೋಮವಾರ ರಾತ್ರಿ ಲೇಹ್‌ ನಲ್ಲಿ ಹೃದಯ ಸ್ತಂಭನದಿಂದ ನಿಧನರಾದರು.

Advertisement

ಪೆಪ್ಪರ್‌ ಫ್ರೈ ಸಹ-ಸಂಸ್ಥಾಪಕ ಆಶಿಶ್ ಶಾ ಟ್ವಿಟ್ಟರ್‌ ನಲ್ಲಿ ಮೂರ್ತಿ ಅವರ ನಿಧನದ ಬಗ್ಗೆ ಮಾಹಿತಿ ನೀಡಿದ್ದು, “ನನ್ನ ಸ್ನೇಹಿತ, ಮಾರ್ಗದರ್ಶಕ, ಸಹೋದರ, ಆತ್ಮದ ಗೆಳೆಯ ಅಂಬರೀಶ್ ಮೂರ್ತಿ ಅವರು ಇನ್ನಿಲ್ಲ ಎಂದು ತಿಳಿಸಲು ತುಂಬಾ ದುಃಖವಾಯಿತು. ನಿನ್ನೆ ರಾತ್ರಿ ಲೇಹ್‌ ನಲ್ಲಿ ಹೃದಯ ಸ್ತಂಭನದಿಂದ ಅವರು ನಿಧನಹೊಂದಿರು” ಎಂದಿದ್ದಾರೆ.

ಇದನ್ನೂ ಓದಿ:Vitla: ನೆರೆಮನೆ ಕಿರಿಕಿರಿ : ಮಹಿಳೆಯ ಮಾನಭಂಗಕ್ಕೆ ಯತ್ನ, ನಾಲ್ವರ ವಿರುದ್ಧ ಪ್ರಕರಣ ದಾಖಲು

ಅಂಬರೀಶ್ ಮೂರ್ತಿ ಪೆಪ್ಪರ್‌ಫ್ರೈನ ಸಿಇಒ ಆಗಿ ಸೇವೆ ಸಲ್ಲಿಸಿದರೆ, ಆಶಿಶ್ ಶಾ ಅವರು ಸಿಒಒ ಆಗಿದ್ದಾರೆ.

Advertisement

ಆನ್‌ಲೈನ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಮೂರ್ತಿ ಐಐಎಂ ಕಲ್ಕತ್ತಾದ ಹಳೆಯ ವಿದ್ಯಾರ್ಥಿಯಾಗಿದ್ದರು.  ಬೈಕರ್ ಮತ್ತು ಟ್ರೆಕ್ಕಿಂಗ್ ಉತ್ಸಾಹಿಯಾಗಿದ್ದ ಮೂರ್ತಿ ತಮ್ಮ ವೃತ್ತಿಜೀವನವನ್ನು ಜೂನ್ 1996 ರಲ್ಲಿ ಕ್ಯಾಡ್ಬರಿಯೊಂದಿಗೆ ಮಾರಾಟ ಮತ್ತು ಮಾರುಕಟ್ಟೆ ವೃತ್ತಿಪರರಾಗಿ ಪ್ರಾರಂಭಿಸಿದರು. ಆನ್‌ಲೈನ್ ಪೀಠೋಪಕರಣ ಉದ್ಯಮವನ್ನು ಪ್ರಾರಂಭಿಸುವ ಮೊದಲು ಅವರು ಐಸಿಐಸಿಐ ಪ್ರುಡೆನ್ಶಿಯಲ್, ಲೆವಿಸ್, ಬ್ರಿಟಾನಿಯಾ ಮತ್ತು ಇಬೇ ಜೊತೆ ಕೆಲಸ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next