Advertisement

ಸಾಹೇಬ ಪ್ರೀಮಿಯರ್‌ ಶೋಗೆ ಜನವೋ ಜನ

12:43 PM Aug 28, 2017 | Team Udayavani |

ರವಿಚಂದ್ರನ್‌ ಅವರ ಪುತ್ರ ಮನೋರಂಜನ್‌ ಅಭಿನಯದ ಮೊದಲ ಚಿತ್ರ “ಸಾಹೇಬ’, ಗಣಪತಿ ಹಬ್ಬದಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಎಲ್ಲಾ ಕಡೆ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳು ವ್ಯಕ್ತವಾಗುತ್ತಿವೆ.

Advertisement


ಈ ಮಧ್ಯೆ ಚಿತ್ರತಂಡವು ಚಿತ್ರರಂಗದ ಸೆಲೆಬ್ರಿಟಿಗಳಿಗಾಗಿಯೇ ಒಂದು ವಿಶೇಷ ಪ್ರದರ್ಶನವನ್ನು ಆಯೋಜಿಸಿತ್ತು. ಈ ಪ್ರೀಮಿಯರ್‌ ಪ್ರದರ್ಶನದಲ್ಲಿ ರವಿಚಂದ್ರನ್‌ ಅವರು ತಮ್ಮ ಕುಟುಂಬದವರೊಡನೆ ಚಿತ್ರ ನೋಡಿದರು.

ರವಿಚಂದ್ರನ್‌ ಅಲ್ಲದೆ, ಅಂದು ಕನ್ನಡ ಚಿತ್ರರಂಗದ ಸಾಕಷ್ಟು ಸೆಲೆಬ್ರಿಟಿಗಳು ಚಿತ್ರವನ್ನು ನೋಡಿದ್ದಾರೆ. ಯಶ್‌, ರಾಧಿಕಾ ಪಂಡಿತ್‌, ಹಂಸಲೇಖ, “ನೆನಪಿರಲಿ’ ಪ್ರೇಮ್‌, ವಿನಯ್‌ ರಾಜಕುಮಾರ್‌, ಧನಂಜಯ್‌, ಭಗವಾನ್‌, ಸತ್ಯ ಹೆಗಡೆ, ಮಂಜು ಮಾಂಡವ್ಯ, ಪವನ್‌ ಒಡೆಯರ್‌, ಹಾಗೂ

Advertisement

-ಕವಿರಾಜ್‌, ಅನೀಶ್‌ ತೇಜೇಶ್ವರ್‌, ನೇಹಾ ಪಾಟೀಲ್‌, ಸಿಂಧು ಲೋಕನಾಥ್‌, ನಂದಕಿಶೋರ್‌, ಎ.ಪಿ. ಅರ್ಜುನ್‌, ತರುಣ್‌ ಸುಧೀರ್‌, ಎಸ್‌.ಎ. ಚಿನ್ನೇಗೌಡ, ಹರ್ಷಿಕಾ ಪೂಣಾತ್ಛ, ಕಾವ್ಯಾ ಶಾ ಸೇರಿದಂತೆ ಹಲವರು ಚಿತ್ರವನ್ನು ನೋಡಿದ್ದಷ್ಟೇ ಅಲ್ಲ, ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

“ಸಾಹೇಬ’ ಚಿತ್ರದಲ್ಲಿ ಮನೋರಂಜನ್‌ ಜೊತೆಗೆ ಸಾನ್ವಿ ಶ್ರೀವಾತ್ಸವ್‌ ನಾಯಕಿಯಾಗಿ ನಟಿಸಿದ್ದಾರೆ. ಹಿರಿಯ ನಟಿ ಲಕ್ಷ್ಮಿ ಸಹ ಒಂದು ಬಹಳ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಭರತ್‌ ನಿರ್ದೇಶಿಸಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ ಕೂಡಾ ಅವರದ್ದೇ.

ಇನ್ನು ಜಯಣ್ಣ ಮತ್ತು ಭೋಗೇಂದ್ರ ಈ ಚಿತ್ರದ ನಿರ್ಮಾಪಕರು. ರವಿಚಂದ್ರನ್‌ ಅವರ ಖಾಯಂ ಕ್ಯಾಮೆರಾಮ್ಯಾನ್‌ ಆಗಿರುವ ಜಿ.ಎಸ್‌.ವಿ. ಸೀತಾರಾಂ ಅವರು ಈ ಚಿತ್ರದ ಛಾಯಾಗ್ರಾಹಕರು. ಹರಿಕೃಷ್ಣ ಚಿತ್ರಕ್ಕೆ ಹಾಡುಗಳನ್ನು ಸಂಯೋಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next