Advertisement

ಪೆಂಡಾಲ್‌ ಕುಸಿದು ಐವರಿಗೆ ಸಣ್ಣಪುಟ್ಟ ಗಾಯ

03:48 AM Feb 15, 2019 | Team Udayavani |

ಬೆಳ್ತಂಗಡಿ: ಧರ್ಮಸ್ಥಳ ಮಹಾಮಸ್ತಕಾಭಿಷೇಕದ ಪಂಚಮಹಾ ವೈಭವದ ಬೃಹತ್‌ ಪೆಂಡಾಲ್‌ನ ಒಂದು ಬದಿ ಗುರುವಾರ ಅಪರಾಹ್ನದ ವೇಳೆ ಕುಸಿದು, 5 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾರ್ಯಕ್ರಮಗಳು ಗೊಂದಲವಿಲ್ಲದೆ ಮುಂದುವರಿದಿದ್ದು, ಮುಂದೆಯೂ ನಿಗದಿಯಂತೆ ನಡೆಯುತ್ತವೆ. ಘಟನೆಯಿಂದ ಪ್ರಸಿದ್ಧಿ ಜೈನ್‌, ಚಂದ್ರಾವತಿ, ಪ್ರಣವ್‌, ವಿದ್ಯಾನಂದ ಜೈನ್‌ ಹಾಗೂ ಸಂಧ್ಯಾ ಅವರಿಗೆ ತರಚಿದ ಮತ್ತು ಗುದ್ದಿದ ಗಾಯವಾಗಿದ್ದು, ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ಘಟನಾ ಸ್ಥಳಕ್ಕೆ ಪುತ್ತೂರು ಸಹಾಯಕ ಕಮಿಷನರ್‌ ಡಾ| ಎಚ್‌.ಕೆ. ಕೃಷ್ಣಮೂರ್ತಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾವುದೇ ಆತಂಕ ಪಡಬೇಕಿಲ್ಲ. ಕಾರ್ಯಕ್ರಮದಲ್ಲಿ ಬದಲಾವಣೆ ಇಲ್ಲದೆ ನಿಗದಿಯಂತೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಸ್ಥಳಕ್ಕೆ ನೋಡೆಲ್‌ ಅಧಿಕಾರಿ ಶಿವಪ್ರಸಾದ್‌ ಅಜಿಲ, ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು, ಧರ್ಮಸ್ಥಳ ಪಿಎಸ್‌ಐ ಅವಿನಾಶ್‌ ಭೇಟಿ ನೀಡಿದ್ದಾರೆ. 

ಮಸ್ತಕಾಭಿಷೇಕ ಸಮಿತಿಯ ಸ್ಪಷ್ಟನೆ
ಕೆಲವು ಸುದ್ದಿ ವಾಹಿನಿಗಳಲ್ಲಿ ಧರ್ಮಸ್ಥಳದ ಘಟನೆಯನ್ನು ವೈಭವೀಕರಿಸಿ ತಪ್ಪು ಮಾಹಿತಿ ನೀಡಲಾಗಿದೆ. ಚಪ್ಪರ ಭಾಗಶಃ ಕುಸಿದು ಐವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು,ಎಲ್ಲರೂ ಚೇತರಿಸಿಕೊಂಡಿದ್ದಾರೆ. ಘಟನೆಯ ಬಳಿಕ ಎಲ್ಲ ಕಾರ್ಯಕ್ರಮಗಳು ನಡೆದಿದ್ದು, ಮುಂದೆಯೂ ನಿಗದಿಯಂತೆ ಸಾಗಲಿವೆ. ಯಾರೂ ಅನಧಿಕೃತ ಗಾಳಿ ಸುದ್ದಿಗೆ ಕಿವಿಗೊಡಬಾರದು ಎಂದು ಮಸ್ತಕಾಭಿಷೇಕ ಮಹೋತ್ಸವ ಸಮಿತಿ ಸ್ಪಷ್ಟಪಡಿಸಿದೆ.

ಪಂಚಮಹಾವೈಭವ ನಡೆಯುತ್ತಿದ್ದ ಸ್ಥಳದಲ್ಲಿ ನಡೆದ ಪೆಂಡಾಲ್‌ ಕುಸಿದು 5 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಉಳಿದಂತೆ ಯಾವುದೇ ಗೊಂದಲಗಳಿಲ್ಲ.
ಡಾ| ಬಿ.ಎಂ. ಲಕ್ಷ್ಮೀಪ್ರಸಾದ್‌,  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next