Advertisement

ಪೆಗಾಸಸ್‌: ಸರಕಾರಕ್ಕೆ 13ರ ವರೆಗೆ ಗಡುವು

12:57 AM Sep 08, 2021 | Team Udayavani |

ಹೊಸದಿಲ್ಲಿ: ಪೆಗಾಸಸ್‌ ಗೂಢಚರ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆ ಸೆ.13ರಂದು ನಡೆಯಲಿದೆ. ಸ್ವತಂತ್ರ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ವಿಚಾರಣೆ ವೇಳೆ, ಕೇಂದ್ರ ಸರಕಾರ ಉತ್ತರ ನೀಡಲು ಕಾಲಾ ವಕಾಶ ಬೇಕೆಂದು ಕೋರಿದ್ದು, ಅದಕ್ಕೆ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ನ್ಯಾಯಪೀಠ ಸಮ್ಮತಿ ಸೂಚಿಸಿದೆ.

Advertisement

ಕೆಲವು ತಾಂತ್ರಿಕ ಕಾರಣಗಳಿಂದ ಆ.17ರಂದು ನ್ಯಾಯಪೀಠ ಸೂಚಿಸಿದ್ದಂತೆ ಉತ್ತರ ಸಲ್ಲಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಕೊಂಚ ಸಮಯ ವಿಸ್ತರಣೆ ಬೇಕು ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಕೋರಿಕೊಂಡರು. ಅದಕ್ಕೆ ನ್ಯಾಯಪೀಠ ಸಮ್ಮತಿಸಿತು.

 

Advertisement

Udayavani is now on Telegram. Click here to join our channel and stay updated with the latest news.

Next