Advertisement

winter assembly session ನಿಗದಿತ ದಿನಾಂಕದಂದು ಸಾರಿಗೆ ನೌಕರರಿಗೆ ವೇತನ ಪಾವತಿ

12:28 AM Dec 07, 2023 | Team Udayavani |

ಬೆಳಗಾವಿ: ಕರ್ನಾಟಕ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ಯಾವುದೇ ನೌಕರರ ವೇತನ ಬಾಕಿ ಉಳಿಸಿಕೊಂಡಿಲ್ಲ. ಆಯಾ ನಿಗಮಗಳಲ್ಲಿ ನಿಗದಿತ ದಿನಾಂಕದಂದು ನೌಕರರಿಗೆ ವೇತನ ಪಾವತಿ ಯಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

Advertisement

ವಿಧಾನಪರಿಷತ್‌ದಲ್ಲಿ ಸದಸ್ಯ ಕೆ.ಎಸ್‌. ನವೀನ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು ನೌಕರರ ವೇತನ ತಡೆಹಿಡಿದಿಲ್ಲ. ಭವಿಷ್ಯ ನಿಧಿ ಅಥವಾ ಇಎಸ್‌ಐ ಹಣ ಬಾಕಿ ಇಲ್ಲ. ಈಗ ಸಾರಿಗೆ ನಿಗಮಗಳಿಂದ ಐದು ಸಾವಿರ ಸಾಲದ ಹೊರೆ ಇದೆ ಎಂದರು.

ಶಕ್ತಿ ಯೋಜನೆ ಬಂದ ಮೇಲೆ ಸಾರಿಗೆ ನಿಗಮಗಳ ಆದಾಯದಲ್ಲಿ ಹೆಚ್ಚಳವಾಗಿದೆ. ಶಕ್ತಿ ಯೋಜನೆಗೆ ಮೊದಲು 22.40 ಕೋಟಿ ಆದಾಯ ಬರುತ್ತಿತ್ತು. ಈಗ ಸರಾಸರಿ 30.48 ಕೋಟಿ ಆದಾಯ ಬರುತ್ತಿದೆ. 2023-24 ನೇ ಸಾಲಿನ ಬಜೆಟ್‌ದಲ್ಲಿ ಶಕ್ತಿ ಯೋಜನೆಯಡಿ ನಾಲ್ಕೂ ನಿಗಮಗಳಿಗೆ 2800 ಕೋಟಿ ರೂ.ಅನುದಾನ ಒದಗಿಸಲಾಗಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next