Advertisement

ರೈಲು ಪ್ರಯಾಣಿಕನ ಸಕಾಲಿಕ ಟ್ವೀಟ್‌: 26 ಬಾಲಕಿಯರ ರಕ್ಷಣೆ

07:29 PM Jul 06, 2018 | udayavani editorial |

ಹೊಸದಿಲ್ಲಿ : ರೈಲು ಪ್ರಯಾಣಿಕರೊಬ್ಬರು ಟ್ಟಿಟರ್‌ ಮೂಲಕ ಜಾಗೃತಗೊಳಿಸಿದ ಪರಿಣಾಮವಾಗಿ ಜಿಆರ್‌ಪಿ ಮತ್ತು ಆರ್‌ಪಿಎಫ್ ಸಿಬಂದಿಗಳು ಮುಜಫ‌ರಪುರ – ಬಾಂದ್ರಾ ಅವಧ್‌ ಎಕ್ಸ್‌ಪ್ರೆಸ್‌ ರೈಲಿನಿಂದ ಕನಿಷ್ಠ 26 ಮಂದಿ ಬಾಲಕಿಯರು ಕಳ್ಳಸಾಗಣೆಗೆ ಗುರಿಯಾಗುವುದನ್ನು ತಪ್ಪಿಸಿ ಅವರನ್ನು ರಕ್ಷಿಸಿರುವ ಘಟನೆ ವರದಿಯಾಗಿದೆ.

Advertisement

ನಿನ್ನೆ ಗುರುವಾರ ಜುಲೈ 5ರಂದು ರೈಲು ಪ್ರಯಾಣಿಕರೋರ್ವರು “ನಾನು ಎಸ್‌5 ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದೇನೆ; 26 ಬಾಲಕಿಯರು ಅಸಹಾಯಕರಾಗಿ ಅಳುತ್ತಿರುವುದನ್ನು ಕಾಣುತ್ತಿದ್ದೇನೆ” ಎಂದು ರೈಲಿನ ರಕ್ಷಣಾ ಅಧಿಕಾರಿಗಳಿಗೆ ಟ್ವೀಟ್‌ ಮಾಡಿದ್ದರು. 

ಈ ಟ್ವೀಟ್‌ಗೆ ತತ್‌ಕ್ಷಣ ಸ್ಪಂದಿಸಿದ ವಾರಾಣಸಿ ಮತ್ತು ಲಕ್ನೋದಲ್ಲಿನ ಅಧಿಕಾರಿಗಳು ಕ್ರಿಯಾಶೀಲರಾಗಿ ಅರ್ಧ ತಾಸಿನೊಳಗೆ ತನಿಖೆ ನಡೆಸಿದರು. ಕಪ್ತಾನ್‌ಗಂಜ್‌ ನಲ್ಲಿ ರೈಲು ಹತ್ತಿದ ನಾಗರಿಕ ಉಡುಪಿನಲ್ಲಿದ್ದ ಇಬ್ಬರು ಆರ್‌ಪಿಎಫ್ ಜವಾನರು ಬಾಲಕಿಯರನ್ನು ರಕ್ಷಿಸಿ ಗೋರಖ್‌ಪುರಕ್ಕೆ ಕರೆ ತಂದರು. 

26 ಮಂದಿ ಬಾಲಕಿಯರೊಂದಿಗೆ 22 ಮತ್ತು 55 ವರ್ಷ ವಯಸ್ಸಿನ ಇಬ್ಬರು ವ್ಯಕ್ತಿಗಳಿದ್ದರು. ಇವರೆಲ್ಲರೂ ಬಿಹಾರದ ಚಂಪಾರಣ್‌ ನವರು. ಹುಡುಗಿಯರನ್ನು ನರ್ಕತಿಕ್ಯಾಗಂಜ್‌ ನಿಂದ ಈದ್ಗಾ ಕ್ಕೆ ಒಯ್ಯಲಾಗುತ್ತಿತ್ತು. ಹುಡುಗಿಯರನ್ನು ಪ್ರಶ್ನಿಸಿದಾಗ ಅವರಿಂದ ಯಾವುದೇ ರೀತಿಯ ಸರಿಯಾದ ಉತ್ತರ ಬರಲಿಲ್ಲ; ಆದ ಕಾರಣ ಅವರನ್ನು ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ಒಪ್ಪಿಸಲಾಯಿತು ಎಂದು ಭದ್ರತಾ ಅಧಿಕಾರಿಗಳು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next