Advertisement

Paris Olympics: ರಾಜ್ಯದ ಅಥ್ಲೀಟ್‌ಗಳಿಗೆ ಸಿಎಂ ತಲಾ 5 ಲಕ್ಷ ಮಂಜೂರು

08:58 PM Jul 20, 2024 | Team Udayavani |

ಬೆಂಗಳೂರು: ಪ್ರತಿಷ್ಠಿತ ಪ್ಯಾರಿಸ್‌ ಒಲಿಂಪಿಕ್ಸ್‌ ಕ್ರೀಡಾಕೂಟದ ವೇಳೆ ಭಾರತವನ್ನು ಪ್ರತಿನಿಧಿಸಲಿರುವ ರಾಜ್ಯದ 9 ಕ್ರೀಡಾಪಟುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಲಾ 5 ಲಕ್ಷ ರೂ. ಪ್ರೋತ್ಸಾಹ ಧನ ಮಂಜೂರು ಮಾಡಿದ್ದಾರೆ.

Advertisement

ಕರ್ನಾಟಕ ಒಲಂಪಿಕ್‌ ಅಸೋಸಿಯೇಶನ್‌ನ ಅಧ್ಯಕ್ಷ ಡಾ.ಕೆ.ಗೋವಿಂದರಾಜು, ರಾಜ್ಯದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ನೀಡುವಂತೆ ಮನವಿ ಮಾಡಿದ್ದರು.

ಜು.26ರಿಂದ ನಡೆಯಲಿರುವ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ರಾಜ್ಯದಿಂದ ಮಹಿಳಾ ಡಬಲ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಅಶ್ವಿ‌ನಿ ಪೊನ್ನಪ್ಪ, ಮಹಿಳಾ ಗಾಲ್ಫ್ನಲ್ಲಿ ಅದಿತಿ ಅಶೋಕ್‌, ಮಹಿಳಾ ಫ್ರಿಸ್ಟೈಲ್‌ ಈಜಿನಲ್ಲಿ ಧೀನಿಧಿ ದೇಸಿಂಗೊ, ಮಿಶ್ರ ರಿಲೇ ಓಟದಲ್ಲಿ ಎಂ.ಆರ್‌.ಪೂವಮ್ಮ, ಟೇಬಲ್‌ ಟೆನಿಸ್‌ನಲ್ಲಿ ಅರ್ಚನಾ ಕಾಮತ್‌, ಪುರುಷರ ಈಜಿನಲ್ಲಿ ಶ್ರೀಹರಿ ನಟರಾಜ್‌, ಪುರುಷರ ಡಬಲ್ಸ್‌ ಟೆನಿಸ್‌ನಲ್ಲಿ ರೋಹನ್‌ ಬೋಪಣ್ಣ, ಪುರುಷರ 71 ಕೇಜಿ ಬಾಕ್ಸಿಂಗ್‌ನಲ್ಲಿ ನಿಶಾಂತ್‌ ದೇವ್‌, ಮಿಕ್ಸ್‌ಡ್‌ ರಿಲೇ ಓಟದಲ್ಲಿ ಮಿಜೋ ಚಾಕೋ ದೇಶವನ್ನು ಸ್ಪರ್ಧಿಸುತ್ತಿದ್ದಾರೆ. ಈ 9 ಮಂದಿಗೂ ಮುಖ್ಯಮಂತ್ರಿ ಪ್ರೋತ್ಸಾಹ ಧನ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next