Advertisement

ಈ ಗೆಂಡೆತಿಮ್ಮನಿಗೆ ಪರಸಂಗ ಇಲ್ಲ…!

11:13 AM Jan 16, 2017 | |

ರಮೇಶ್‌ ಕಶ್ಯಪ್‌ ಇನ್ನೊಂದು ಚಿತ್ರವನ್ನು ನಿರ್ಮಿಸುವ ಉತ್ಸಾಹದಲ್ಲಿದ್ದಾರೆ. ಆ ಚಿತ್ರದ ಹೆಸರು “ಗೆಂಡೆತಿಮ್ಮ’. “ಗೆಂಡೆತಿಮ್ಮ’ ಎಂದರೆ ನೆನಪಿಗೆ ಬರುವುದು ಆಲನಹಳ್ಳಿ ಕೃಷ್ಣ ಅವರ “ಪರಸಂಗದ ಗೆಂಡೆತಿಮ್ಮ’ ಕಾದಂಬರಿ ಮತ್ತು ಅದನ್ನು ಆಧರಿಸಿದ ಲೋಕೇಶ್‌ ಅಭಿನಯದ ಚಿತ್ರ. ಆ “ಪರಸಂಗದ ಗೆಂಡೆತಿಮ್ಮ’ನಿಗೂ, ಈ “ಗೆಂಡೆತಿಮ್ಮ’ನಿಗೂ ಯಾವುದೇ ಸಂಬಂಧವಿಲ್ಲವಂತೆ.

Advertisement

ಈ ಚಿತ್ರದ ಕಥೆಗೆ “ಗೆಂಡೆತಿಮ್ಮ’ ಎನ್ನುವ ಹೆಸರು ಸೂಕ್ತ ಎನ್ನುವ ಕಾರಣದಿಂದ ಆ ಹೆಸರನ್ನು ಇಡಲಾಗಿದೆ. ಅಂದಹಾಗೆ, ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವುದರ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿರುವವರು ಕೆ.ಎಂ. ರಘು. ಹೆಸರು ಎಲ್ಲೋ ಕೇಳಿದ ಹಾಗಿದೆಯಲ್ಲಾ ಎಂಬ ಅನುಮಾನ ಬೇಡ. ಇತ್ತೀಚೆಗೆ ಬಿಡುಗಡೆಯಾಯಿತಲ್ಲ, “ತರೆಲ ವಿಲೇಜ್‌’ ಎಂಬ ಚಿತ್ರ.

ಆ ಚಿತ್ರದ ನಿರ್ದೇನವನ್ನು ಮಾಡಿದ್ದು ಇದೇ ರಘು. ಈಗ ರಘು, “ಗೆಂಡೆತಿಮ್ಮ’ ಚಿತ್ರದ ಮೂಲಕ ವಾಪಸ್ಸು ಬರುತ್ತಿದ್ದಾರೆ. “ಗೆಂಡೆತಿಮ್ಮ’, ರಮೇಶ ಕಶ್ಯಪ್‌ ನಿರ್ದೇಶನದ ಒಂಬತ್ತನೇ ಚಿತ್ರವಾಗಲಿದೆ. ಸದ್ಯಕ್ಕೆ ಈ ಚಿತ್ರಕ್ಕೆ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದೆ. ಎಲ್ಲಾ ಪಕ್ಕಾ ಆಗುತ್ತಿದ್ದಂತೆಯೇ ಚಾಲನೆ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next