Advertisement

ಹಿಮಾಗೆ 10 ಲಕ್ಷ ರೂ.: ಪರಮೇಶ್ವರ್‌ ಘೋಷಣೆ

10:47 AM Jul 15, 2018 | |

ಬೆಂಗಳೂರು: ವಿಶ್ವ ಚಾಂಪಿಯನ್‌ಶಿಪ್‌ 400 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದ ಹಿಮಾ ದಾಸ್‌ಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಶನಿವಾರ ಘೋಷಿಸಿದ್ದಾರೆ. 

Advertisement

ಶ್ರೀ ಸಿದ್ಧಾರ್ಥ್ ಅಕಾಡೆಮಿ ಆಫ್ ಹೈಯರ್‌ ಎಜುಕೇಷನ್‌ನ ಭಾಗವಾಗಿ ಈ ನಗದು ನೀಡಲಾಗುತ್ತಿದೆ. ಹಳ್ಳಿ ಹುಡುಗಿ ಹಿಮಾ ಸಾಧನೆ ಲಕ್ಷಾಂತರ ಯುವ ಕ್ರೀಡಾಪಟು ಗಳಿಗೆ ಮಾದರಿಯಾಗಿದೆ. ಒಲಿಂಪಿಕ್ಸ್‌ ನಲ್ಲೂ ಹಿಮಾ ಪದಕ ಗೆಲ್ಲುವಂ ತಾಗಲಿ ಎಂದು ಪರಮೇಶ್ವರ್‌ ಶುಭ ಹಾರೈಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next