Advertisement

ಪಾಂಡ್ಯ ಸಹೋದರರಿಂದ ಮತ್ತೊಂದು ಕಂತಿನ ಸಹಾಯ

08:00 AM May 25, 2021 | Team Udayavani |

ಅಹಮದಾಬಾದ್: ಟೀಮ್‌ ಇಂಡಿಯಾದ ಆಲ್‌ರೌಂಡರ್‌ ಗಳಾದ ಪಾಂಡ್ಯ ಸಹೋದರರು ಕೊರೊನಾ ಪರಿಹಾರಕ್ಕೆ ಮತ್ತೂಂದು ಕಂತಿನ ನೆರವು ಒದಗಿಸಿದ್ದಾರೆ. ಕೋವಿಡ್‌ ಕೇಂದ್ರಗಳಿಗೆ ಇನ್ನಷ್ಟು ಆಮ್ಲಜನಕದ ಸಾಂದ್ರಕಗಳನ್ನು ನೀಡಿದ್ದಾಗಿ ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ರಣಜಿ ಟ್ರೋಫಿ ಸಾಧನೆಗೆ ಬೆಲೆಯೇ ಇಲ್ಲದಂತಾಗಿದೆ : ಉನಾದ್ಕತ್‌ ನಿರಾಸೆ

ಈ ಕುರಿತು ಟ್ವೀಟ್‌ ಮಾಡಿರುವ ಕೃಣಾಲ್‌ ಮತ್ತು ಹಾರ್ದಿಕ್‌, “ಸೋಂಕಿತರು ಶೀಘ್ರ ಗುಣಮುಖರಾಗಲಿ ಎಂಬ ತುಂಬು ಮನದ ಹಾರೈಕೆಯೊಂದಿಗೆ ಕೋವಿಡ್‌ ಕೇಂದ್ರಗಳಿಗೆ ಹೊಸ ಆಮ್ಲಜನಕ ಸಾಂದ್ರಕಗಳನ್ನು ಕಳುಹಿಸಿ ಕೊಡುತ್ತಿದ್ದೇವೆ. ನಾವು ಕಠಿನ ಯುದ್ಧದ ಮಧ್ಯಭಾಗದಲ್ಲಿದ್ದೇವೆ. ನಾವೆಲ್ಲರೂ ಜತೆಯಾಗಿ ಹೋರಾಡಿದರೆ ಮಾತ್ರ ಈ ಕೊರೊನಾ ಯುದ್ಧವನ್ನು ಗೆಲ್ಲಬಹುದು’ ಎಂದಿದ್ದಾರೆ.

ಇದಕ್ಕೂ ಮುನ್ನ ಪಾಂಡ್ಯ ಕುಟುಂಬ 200 ಆಮ್ಲಜನಕ ಸಾಂದ್ರಕಗಳನ್ನು ಕೊಡುಗೆಯಾಗಿ ನೀಡಿತ್ತು

Advertisement

Udayavani is now on Telegram. Click here to join our channel and stay updated with the latest news.

Next