Advertisement

ಅರಮನೆ ಪ್ರವೇಶ: ಪ್ರವಾಸಿಗರ ಅನುಕೂಲಕ್ಕಾಗಿ ಹೊಸ ಟಿಕೆಟ್‌ ಕೌಂಟರ್‌

11:51 AM Aug 18, 2017 | |

ಮೈಸೂರು: ಮೈಸೂರು ಅರಮನೆಗೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ಅಂಬಾವಿಲಾಸ, ಜಯರಾಮ, ಬಲರಾಮ ದ್ವಾರಗಳ ಬಳಿ ಹೊಸದಾಗಿ ತೆರೆಯಲಾಗಿರುವ ಟಿಕೆಟ್‌ ಕೌಂಟರ್‌ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಉದ್ಘಾಟಿಸಿದರು.

Advertisement

ಮೈಸೂರು ಅರಮನೆ ಮಂಡಳಿ ವತಿಯಿಂದ ಹೊಸದಾಗಿ ವಿನ್ಯಾಸಗೊಳಿಸಿದ ವೆಬ್‌ಸೈಟ್‌ ಸಹ ಇದೇ ಸಂದರ್ಭದಲ್ಲಿ ಅನಾವರಣಗೊಳಿಸಿದರು. ಈ ವೆಬ್‌ಸೈಟ್‌ ಮೂಲಕ ಪ್ರವಾಸಿಗರು ಆನ್‌ಲೈನ್‌ ಟಿಕೇಟ್‌ ಬುಕ್‌ ಮಾಡಬಹುದಾದ ಸೌಲಭ್ಯವಿದ್ದು, ಅರಮನೆ ಪ್ರವೇಶ ಪ್ರವಾಸಿಗರಿಗೆ ಮತ್ತಷ್ಟು ಸರಾಗವಾಗಲಿದೆ ಎಂದು ಸಚಿವ ಮಹದೇವಪ್ಪ ಹೇಳಿದರು.

ಆರೋಗ್ಯ ಶಿಬಿರ: ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆಯುಷ್‌ ಇಲಾಖೆ ವತಿಯಿಂದ ಅರಮನೆಯಲ್ಲಿ ದಸರಾ ಗಜಪಡೆಯ ಮಾವುತರು ಮತ್ತು ಕಾವಾಡಿಗರು ಮತ್ತು ಅವರ ಕುಟುಂಬದವರಿಗೆ ಹಮ್ಮಿಕೊಂಡಿರುವ ಉಚಿತ ಆಯುಷ್‌ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಸಚಿವರು ಇದೇ ಸಂದರ್ಭದಲ್ಲಿ ಉದ್ಘಾಟಿಸಿದರು.

ಈ ಶಿಬಿರದಲ್ಲಿ ಚರ್ಮರೋಗ, ವಾತರೋಗ, ಸ್ತ್ರೀ ರೋಗ, ಶ್ವಾಸರೋಗ, ಜ್ವರ, ಕೆಮ್ಮು, ನೆಗಡಿ ಇತ್ಯಾದಿ ತೊಂದರೆಗಳಿಗೆ ಉಚಿತ ಚಿಕಿತ್ಸೆಗಳನ್ನು ನೀಡಲಾಗುವುದು. ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಜೀರ್ಣಕ್ರಿಯೆ ತೊಂದರೆಗಳಿಗೂ ಸಹ ಚಿಕಿತ್ಸೆ ನೀಡಲಾಗುವುದು. 2016ನೇ ಸಾಲಿನಲ್ಲಿ ನಡೆದ ಶಿಬಿರದಲ್ಲಿ ಮಾವುತರು, ಕಾವಾಡಿಗರು, ಪ್ರವಾಸಿಗರು ಹಾಗೂ ಅರಮನೆ ಸಿಬ್ಬಂದಿ ಸೇರಿದಂತೆ ಸುಮಾರು 1000 ರೋಗಿಗಳನ್ನು ತಪಾಸಣೆಗೆ ಒಳಪಡಿಸಿ ಚಿಕಿತ್ಸೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next