Advertisement

ಪಕೋಡಾ ಮಾರಾಟ ಮಾಡಿಕೇಂದ್ರವನ್ನು ಅಣಕಿಸಿದರು!

10:22 AM Feb 03, 2018 | Team Udayavani |

ಕಲಬುರಗಿ: ನಗರದ ಬಿಜೆಪಿ ಕಚೇರಿ ಎದುರು ಶುಕ್ರವಾರ ಈರುಳ್ಳಿ ಪಕೋಡಾ ಮಾಡಿ, ಜನರಿಗೆ ಮಾರಾಟ ಮಾಡುವ ಮೂಲಕ ಉದ್ಯೋಗಕ್ಕಾಗಿ ಯುವ ಜನರು ಸಂಘಟನೆ ಸದಸ್ಯರು ಕೇಂದ್ರ ಸರ್ಕಾರವನ್ನು ಅಣಕಿಸಿದರು.

Advertisement

ರಾಷ್ಟ್ರದಲ್ಲಿ ಪ್ರತಿ ವರ್ಷ ಒಂದು ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡುವುದಾಗಿ ಹೇಳಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ನಾಲ್ಕು ವರ್ಷ ಅಧಿಕಾರ ನಡೆಸಿದ ಬಳಿಕ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಕೃಷಿ, ಚಹಾ ಮತ್ತು ಪಕೋಡಾ ಮಾಡುವುದು ಕೂಡ ಉದ್ಯೋಗ ಎಂದು ಹೇಳಿದ್ದರು. ಇದೇ ಮಾತನ್ನು ನಿಜ ಮಾಡುವ ನಿಟ್ಟಿನಲ್ಲಿ ಫೆ.2ರಂದು ರಾಜ್ಯಾದಾದ್ಯಂತ ಉದ್ಯೋಗಕ್ಕಾಗಿ ಯುವ ಜನರು ಸಂಘಟನೆಯಿಂದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿನ ಬಿಜೆಪಿ ಕಚೇರಿ ಎದುರು ಪಕೋಡಾ ಮಾಡಿ ಮಾರಾಟ ಮಾಡುವ ಮೂಲಕ ಮೋದಿ ಮಾತನ್ನು ಅಣಕಿಸಿದರು.

ನಗರದ ಬಿಜೆಪಿ ಕಚೇರಿ ಎದುರು ಜಿಲ್ಲಾ ಸಂಚಾಲಕ ರಾಜೇಂದ್ರ ರಾಜವಾಳ ಮತ್ತು ದಿಗಂಬರ ಕಾಡುಹುಲಿ ನೇತೃತ್ವದಲ್ಲಿ ಪಕೋಡಾಗಳನ್ನು ಮಾಡಿ ಜನರಿಗೆ ಸೋವಿಯಾಗಿ ಮಾರಾಟ ಮಾಡಲಾಯಿತು. ಸೈಬಣ್ಣಾ ಜಮಾದಾರ, ಶಿವಲಿಂಗಪ್ಪ ಕಿನ್ನೂರ್‌, ಪದ್ಮಣ್ಣ, ರಾಚಣ್ಣ ಯಡ್ರಾಮಿ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next