Advertisement

Pakistan ಕ್ಯಾನ್ಸರ್‌, ಅದರ ಹುಟ್ಟಿಗೆ ಕಾಂಗ್ರೆಸ್‌ ಕಾರಣ: ಯೋಗಿ

12:58 AM Sep 17, 2024 | Team Udayavani |

ಅಗರ್ತಲಾ: ದೇಶದ ವಿಭಜನೆಯಾಗಿ ಪಾಕಿಸ್ಥಾನ ಉದಯವಾಗಲು ಕಾಂಗ್ರೆಸ್‌ ಕಾರಣ. ಪಾಕಿಸ್ಥಾನವು ವಿನಾಶಕಾರಿ ಕ್ಯಾನ್ಸರ್‌ ಇದ್ದಂತೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆರೋಪಿಸಿದ್ದಾರೆ. “ದೇಶ ವಿಭಜನೆ ಮಾಡಿ ಪಾಕಿಸ್ಥಾನ ಹುಟ್ಟುಹಾಕಲು ಬಯಸಿದ್ದ ಮುಸ್ಲಿಂ ಲೀಗ್‌ಗೆ 1947ರಲ್ಲಿ ಕಾಂಗ್ರೆಸ್‌ನಲ್ಲಿದ್ದವರು ಬೆಂಬಲ ನೀಡಿದ್ದರು. ಬಂಗಾಲ ವಿಭಜನೆಗೆ ಇದ್ದ ಪ್ರತಿರೋಧ ಮುಸ್ಲಿಂ ಲೀಗ್‌ಗೂ ಇದ್ದಿದ್ದರೆ ವಿಭಜನೆ ತಡೆಯಬಹುದಿತ್ತು. ಅಂದು ಹುಟ್ಟಿಕೊಂಡ ಪಾಕಿಸ್ಥಾನ ಈಗ ವಿನಾಶಕಾರಿ ಕ್ಯಾನ್ಸರ್‌ ಆಗಿದೆ’ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next