Advertisement

ಗಡಿಯಲ್ಲಿ ಪಾಕ್‌ ಗುಂಡಿನ ಮಳೆ:ಒಂದೇ ಕುಟುಂಬದ ಐವರು ಬಲಿ

10:47 AM Mar 18, 2018 | Team Udayavani |

ಶ್ರೀನಗರ: ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿ ಗುಂಡಿನ ದಾಳಿ ನಡೆಸುವುದನ್ನು ಪಾಕಿಸ್ಥಾನ ಮುಂದುವರಿಸಿದ್ದು , ಬಾಲ್‌ಕೋಟ್‌ ಸೆಕ್ಟರ್‌ನಲ್ಲಿ ಭಾನುವಾರ ಬೆಳಗ್ಗೆ ಭಾರೀ ದಾಳಿ ನಡೆಸಿದ್ದು ಒಂದೇ ಕುಟುಂಬದ ಐವರು ಭಾರತೀಯ ನಾಗರಿಕರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. 

Advertisement

ಪಾಕ್‌ ದಾಳಿಯಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವುದನ್ನು ಜಮ್ಮು ಮತ್ತು ಕಾಶ್ಮೀರ ಡಿಜಿಪಿ ಎಸ್‌ಪಿ ವಾಯಿದ್‌ ಅವರು ಧೃತ ಪಡಿಸಿದ್ದಾರೆ. 

ಮೃತರು ದೇವತಾ ವಿಹಾರ್‌ ಗ್ರಾಮದ ಚೌಧರಿ ಮಹಮದ್‌ ರಮ್‌ಜಾನ್‌ , ಆತನ ಪತ್ನಿ ಮತ್ತು ಮೂವರು ಮಕ್ಕಳು, ಇನ್ನಿಬ್ಬರು ಮಕ್ಕಳು ಗಾಯಾಳುಗಳು ಎಂದು ತಿಳಿದು ಬಂದಿದೆ. 

ಮೋರ್ಟಾರ್‌ ಶೆಟ್‌ ಮತ್ತು ಗುಂಡಿನ ದಾಳಿ ನಡೆಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. 

ಪಾಕ್‌ ದಾಳಿಗೆ ಭಾರತೀಯ ಸೈನಿಕರು ತಕ್ಕ ಉತ್ತರ ನೀಡಿದ್ದು , ಭಾರೀ ಪ್ರಮಾಣದಲ್ಲಿ ಪ್ರತಿ ದಾಳಿ ನಡೆಸುವ ಸಿದ್ಧತೆ ನಡೆಸಿದ್ದಾರೆ ಎಂದು ವರದಿಯಾಗಿದೆ. 

Advertisement

ಪಾಕ್‌ ವಿದೇಶಾಂಗ ಸಚಿವ ಖ್ವಾಜಾ ಮಹಮದ್‌ ಆಸಿಫ್ ಗಡಿಯಲ್ಲಿ ಗುಂಡಿನ ದಾಳಿ ನಡೆಯುತ್ತಿರುವ ಹಿನ್ನಲೆಯಲ್ಲಿ ನಾವು ಭಾರತದೊಂದಿಗೆ ಸಂಬಂಧವನ್ನು ಉತ್ತಮ ಪಡಿಸಮು ಇಚ್ಛಿಸುವುದಿಲ್ಲ ಎಂದು 3 ದಿನಗಳ ಒಳಗೆ ಪಾಕ್‌ ಭಾರೀ ದಾಳಿ ನಡೆಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next