Advertisement
ರವಿವಾರ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ಥಾನ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ 9 ವಿಕೆಟಿಗೆ 197 ರನ್ ಪೇರಿಸಿತು. ಜವಾಬಿತ್ತ ಭಾರತ 17.4 ಓವರ್ಗಳಲ್ಲಿ ಒಂದೇ ವಿಕೆಟ್ ನಷ್ಟಕ್ಕೆ 200 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು.
Related Articles
ಚೇಸಿಂಗ್ ಹಾದಿಯಲ್ಲಿ ಆರಂಭಿಕಾರಾದ ಕನ್ನಡಿಗ ಪ್ರಕಾಶ್ ಜಯರಾಮಯ್ಯ (ಅಜೇಯ 99) ಮತ್ತು ಅಜಯ್ ಕುಮಾರ್ ರೆಡ್ಡಿ (43) ಭಾರತಕ್ಕೆ ಮತ್ತೂಮ್ಮೆ ನೆರವಾದರು. ಲೀಗ್ ಹಂತದಿಂದಲೂ ಅತ್ಯುತ್ತಮ ಪ್ರದರ್ಶನ ನೀಡುತ್ತ ಬಂದಿದ್ದ ಪ್ರಕಾಶ್ ಕೇವಲ ಒಂದು ರನ್ನಿನಿಂದ ಶತಕ ವಂಚಿತರಾದರು. ಅಷ್ಟರಲ್ಲಿ ಭಾರತದ ಜಯಭೇರಿ ಮೊಳಗಲ್ಪಟ್ಟಿತತ್ತು.
Advertisement
ಅಜಯ್ ಕುಮಾರ್ ರೆಡ್ಡಿ ಜತೆಗೂಡಿದ ಪ್ರಕಾಶ್ ಮೊದಲ ವಿಕೆಟಿಗೆ 110 ರನ್ ಜತೆಯಾಟ ನಡೆಸಿ ಭಾರತದ ಗೆಲುವನ್ನು ಖಾತ್ರಿ ಪಡಿಸಿದ್ದರು. ತಂಡದ ಮೊತ್ತ 110 ರನ್ ಆಗಿದ್ದಾಗ ಅಜಯ್ ರನೌಟಾದರು. ಅನಂತರ ಬಂದ ಕೇತನ್ ಪಟೇಲ್ 26 ರನ್ ಮಾಡಿ ಗಾಯಾಳಾಗಿ ಹೊರ ನಡೆದರು. ಬಳಿಕ ಡಿ. ವೆಂಕಟೇಶ್ ಅವರನ್ನು ಕೂಡಿಕೊಂಡ ಪ್ರಕಾಶ್ ತಂಡವನ್ನು ದಡ ಸೇರಿಸಿದರು. ಪಾಕಿಸ್ಥಾನದ ಯಾವುದೇ ಬೌಲರಿಗೂ ಭಾರತವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.
ಪಾಕಿಸ್ಥಾನದ ಆರಂಭಿಕರಾದ ಬಾದರ್ ಮುನೀರ್ (57 ರನ್) ಮತ್ತು ಮೊಹಮ್ಮದ್ ಜಮೀಲ್ (5 ರನ್) 58 ರನ್ ಜತೆಯಾಟ ನೀಡಿದರು. ಇವರಿಬ್ಬರು ಕ್ರೀಸ್ ಆಕ್ರಮಿಸಿಕೊಂಡು ನಿಂತರು ಎನ್ನುವಷ್ಟರಲ್ಲಿ ಗಣೇಶ್ ಮಿಂಚಿನ ಕ್ಷೇತ್ರರಕ್ಷಣೆ ನಡೆಸಿ ಜಮೀಲ್ ಅವರನ್ನು ರನೌಟ್ ಮಾಡಿದರು. ಅನಂತರ ಬಾದರ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರಾದರೂ ಅವರಿಗೆ ಸೂಕ್ತ ಜತೆಗಾರನ ಕೊರತೆ ಕಾಡಿತು. ಅರ್ಧ ಶತಕ ದಾಖಲಿಸಿದ ಬಾದರ್ (57) ತಂಡದ ಮೊತ್ತ 118 ರನ್ ಆಗಿದ್ದಾಗ ಬೌಂಡರಿ ಬಳಿ ಕೇತನ್ ಪಟೇಲ್ ಪಡೆದ ಅದ್ಭುತ ಕ್ಯಾಚ್ಗೆ ಔಟಾಗುತ್ತಿದ್ದಂತೆ ಪಾಕಿಸ್ಥಾನ ನಾಟಕೀಯ ಕುಸಿತ ಕಂಡಿತು.
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ- 20 ಓವರ್ಗಳಲ್ಲಿ 9 ವಿಕೆಟಿಗೆ 197 (ಬಾದರ್ 57, ಆಮಿರ್ 20, ಕೇತನ್ 29ಕ್ಕೆ 2). ಭಾರತ-17.4 ಓವರ್ಗಳಲ್ಲಿ ಒಂದು ವಿಕೆಟಿಗೆ 200 (ಪ್ರಕಾಶ್ ಅಜೇಯ 99, ಅಜಯ್ 43).