Advertisement

ಪಾಕ್‌ ನುಸುಳುಕೋರನ ಹತ್ಯೆ; ಸಾಂಬಾದಲ್ಲಿ ಒಳನುಸುಳುತ್ತಿದ್ದಂತೆ ಯೋಧರ ಗುಂಡು

11:29 PM Jan 03, 2022 | Team Udayavani |

ಶ್ರೀನಗರ/ಜಮ್ಮು: ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ನುಸುಳುಕೋರ ನೊಬ್ಬನನ್ನು ಸೋಮವಾರ  ಬಿಎಸ್‌ಎಫ್ ಯೋಧರು ಕೊಂದಿದ್ದಾರೆ.

Advertisement

ರಾಮಗಢ ಗಡಿಯಲ್ಲಿ ಅನು ಮಾನಾಸ್ಪದ ಚಲನ ವಲನ ಕಂಡುಬಂದ ಹಿನ್ನೆಲೆ ಜಾಗೃತ ರಾದ ಯೋಧರು, ಪಾಕಿಸ್ಥಾನಿ ನುಸುಳುಕೋರನ ಮೇಲೆ ಗುಂಡು ಹಾರಿಸಿದ್ದಾರೆ. ಆತನನ್ನು ಪ್ರಶ್ನಿಸಲು ಯತ್ನಿಸಿದರೂ ಆತ ಮಣಿಯದ ಕಾರಣ ಗುಂಡು ಹಾರಿಸ ಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರವಿವಾರವಷ್ಟೇ ದೇಶ ದೊಳಕ್ಕೆ ನುಸುಳಲು ಯತ್ನಿಸಿದ್ದ ಪಾಕ್‌ ಸೈನಿಕ ನನ್ನು ಹೊಡೆದುರುಳಿಸಲಾಗಿತ್ತು.

ಇಬ್ಬರು ಉಗ್ರರ ಅಂತ್ಯ: ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಮವಾರ 2 ಪ್ರತ್ಯೇಕ ಎನ್‌ಕೌಂಟರ್‌ ನಡೆಸಿ, ಇಬ್ಬರು ಉಗ್ರರ ಹತ್ಯೆಗೈಯಲಾಗಿದೆ. ಶ್ರೀನಗರದ ಹೊರ ವಲಯದಲ್ಲಿರುವ ಹರ್ವಾನ್‌ ಪ್ರದೇಶದಲ್ಲಿ ಮೊದಲ ಎನ್‌ಕೌಂಟರ್‌ ನಡೆದಿದೆ.

ಇದನ್ನೂ ಓದಿ:ಪ್ಯಾಂಗಾಂಗ್‌ ಸರೋವರಕ್ಕೆ ಸೇತುವೆ ನಿರ್ಮಿಸುತ್ತಿದೆ ಚೀನಾ! ಉಪಗ್ರಹ ಚಿತ್ರದಿಂದ ಸ್ಪಷ್ಟ

Advertisement

ಅದರಲ್ಲಿ ಲಷ್ಕರ್‌-ಎ-ತಯ್ಯಬಾ ಉಗ್ರ ಸಂಘಟನೆಯ ವಾಂಟೆಡ್‌ ಉಗ್ರ ನೆನಿಸಿಕೊಂಡಿದ್ದ ಸಲೀಮ್‌ ಪರ್ರಾಯ್‌ನನ್ನು ಹತ್ಯೆಗೈಯಲಾಗಿದೆ. ಇದೇ ವೇಳೆ ಗಾಸು ಗ್ರಾಮದಲ್ಲಿಯೂ ಎನ್‌ಕೌಂಟರ್‌ ನಡೆಸಲಾಗಿದ್ದು ಓರ್ವ ಉಗ್ರನನ್ನು ಹತ್ಯೆಗೈಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next