Advertisement

ಪೇಜಾವರ ಶ್ರೀ ಆರಾಧನೋತ್ಸವ

06:28 PM Jan 16, 2021 | Team Udayavani |

ಗಂಗಾವತಿ: ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದಂಗಳ ಪ್ರಥಮ ಆರಾಧನೋತ್ಸವದ ಅಂಗವಾಗಿ ಪೇಜಾವರ ಶ್ರೀಗಳ ಭಾವಚಿತ್ರಗಳ ಮೆರವಣಿಗೆ ಸತ್ಯಾಂಜನೇಯ ದೇವಸ್ಥಾನದಿಂದ ಸತ್ಯನಾರಾಯಣಪೇಟೆ ವಿಜಯಧ್ವಜ ವಿದ್ಯಾಪೀಠದ ವರೆಗೆ ಜರುಗಿತು.

Advertisement

ಸತ್ಯನಾರಾಯಣ ದೇಗುಲದ ಆವರಣದಲ್ಲಿ ಉಪನ್ಯಾಸ ಶ್ರೀಗಳ ಅನುಗ್ರಹ ಸಂದೇಶ ಭೂತರಾಜ ಪೂಜೆ ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮೆರವಣಿಗೆಯಲ್ಲಿ ವಿವಿಧ ಮಹಿಳಾ ಭಜನಾಮಂಡಳಿ ಪಾಲ್ಗೊಂಡಿದ್ದವು. ಕಾರ್ಯಕ್ರಮದಲ್ಲಿ ವಾದಿರಾಜಾಚಾರ್ಯ, ಕಲ್ಮಂಗಿ, ಹಾಸ್ಯಭಾಷಣಕಾರ ಬಿ.ಪ್ರಾಣೇಶ, ಕೆ.ನಾರಾಯಣರಾವ್‌, ದರೋಜ ಶ್ರೀರಂಗಶ್ರೇಷ್ಠಿ, ಮೇಗೂರು ರಾಘವೇಂದ್ರ, ಪವನಕುಮಾರ ಗುಂಡೂರು, ಪತ್ರಕರ್ತ ರಾಮಮೂರ್ತಿ ನವಲಿ ಸೇರಿ ವಿಪ್ರ ಸಮಾಜದವರು ಪಾಲ್ಗೊಂಡಿದ್ದರು.

ಇದನ್ನೂ ಓದಿ:ಗ್ರಾಮೀಣ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ: ಜೊಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next