Advertisement

Padubidri ಪಣಿಯೂರಲ್ಲಿ ಮನೆಗಳ್ಳತನ ; 5 ಲ. ರೂ. ಮೌಲ್ಯದ ಚಿನ್ನಾಭರಣ ಕಳವು

01:38 AM Jan 11, 2024 | Team Udayavani |

ಪಡುಬಿದ್ರಿ: ಎಲ್ಲೂರು ಗ್ರಾಮದ ಪಣಿಯೂರು, ಕರಂಬಾರ್‌ ದರ್ಕಾಸ್ತು ಮನೆಯ ಎದುರಿನ ಬೀಗ ಮುರಿದು ಬುಧವಾರ ಮಧ್ಯಾಹ್ನದಿಂದ ಸಂಜೆಯ ನಡುವೆ ಒಳ ಪ್ರವೇಶಿಸಿರುವ ಕಳ್ಳರು, ಮನೆಯಲ್ಲಿನ ಕಪಾಟುಗಳನ್ನು ಜಾಲಾಡಿ, ಸುಮಾರು 5 ಲಕ್ಷ ರೂ. ಮೌಲ್ಯದ ಸುಮಾರು 100 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ತಡರಾತ್ರಿ ಪ್ರಕರಣವು ದಾಖಲಾಗಿದೆ.

Advertisement

ಮನೆ ಯಜಮಾನ ಜಯರಾಮ ಮೂಲ್ಯ ಎಂಆರ್‌ಪಿಎಲ್‌ನಲ್ಲಿ ಹೌಸ್‌ಕೀಪಿಂಗ್‌ ಕೆಲಸ ಮಾಡುತ್ತಿದ್ದು ಬೆಳಗ್ಗೆ 7ಕ್ಕೆ ಕೆಲಸಕ್ಕೆ ಹೋಗಿದ್ದರು. ಅವರ ತಾಯಿಯೂ ಮಧ್ಯಾಹ್ನ ಕಂಚಿನಡ್ಕದ ಸೊಸೆಯ ಮನೆಗೆ ಹೋಗಿದ್ದರು. ಜಯರಾಮ ಮೂಲ್ಯರ ಇಬ್ಬರು ಮಕ್ಕಳೂ ಶಾಲೆಗೆ ಹೋಗಿದ್ದರು. ಸಂಜೆಯ ವೇಳೆಗೆ ಮಗ ಕೌಶಿಕ್‌ ಮನೆಗೆ ಬಂದಾಗ ಮನೆಯ ಬೀಗ ಮುರಿದಿರುವುದು ಕಂಡುಬಂದು ತಂದೆಗೆ ಕರೆ ಮಾಡಿ ವಿಚಾರವನ್ನು ತಿಳಿಸಿದ್ದರು.

ಆ ಕೂಡಲೇ ಹೊರಟು ಪತ್ನಿ ಜತೆಗೇ ಬಂದಿದ್ದ ಜಯರಾಮ ಮೂಲ್ಯರು ಮನೆಯೊಳಕ್ಕೆ ಹೋಗಿ ನೋಡಿದಾಗ ಕಳ್ಳರು ಮೂರು ಕಪಾಟುಗಳನ್ನು ಜಾಲಾ ಡಿದ್ದು ಒಂದು ಕಪಾಟಿನ ಬೀಗ ಮುರಿದು ಅದರಲ್ಲಿರಿಸಿದ್ದ ಚಿನ್ನಾಭರಣಗಳನ್ನು ಕಳವು ಮಾಡಿರುವುದು ತಿಳಿಯಿತು.

ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನ ದಳ, ವಿಶೇಷ ತಂಡವೊಂದರ ಜತೆಗೆ ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ, ಪಿಎಸ್‌ಐ ಪ್ರಸನ್ನ, ಕ್ರೈಂ ಎಸ್‌ಐ ಸುದರ್ಶನ ದೊಡ್ಡಮನಿ ಭೇಟಿ ನೀಡಿದ್ದು ತನಿಖೆಯು ಮುಂದುವರಿದಿದೆ.

ಉಚ್ಚಿಲದಲ್ಲಿ ಮನೆಗಳ್ಳತನ: ದೂರು ದಾಖಲು
ಪಡುಬಿದ್ರಿ: ದುಬಾೖಯಲ್ಲಿ ವ್ಯವಹಾರ ನಡೆಸುತ್ತಿರುವ ಮಹಮ್ಮದ್‌ ಇಬ್ರಾಹಿಂ ಅವರ ಉಚ್ಚಿಲ ಬಡಾ ಗ್ರಾಮದ ಮನೆಗೆ ಜ. 5ರಿಂದ ಜ. 10ರ ನಡುವೆ ಯಾರೋ ಕಳ್ಳರು ಮನೆಯ ಮುಂದಿನ ಬಾಗಿಲನ್ನು ಒಡೆದು ಒಳ ಪ್ರವೇಶಿಸಿ ಚಿನ್ನಾಭರಣ, ಸಿಸಿ ಕೆಮರಾದ ಡಿವಿಆರ್‌, ಮಿಕ್ಸಿಯನ್ನು ಕಳವು ಮಾಡಿ ಒಯ್ದಿರುವುದಾಗಿ ಇಬ್ರಾಹಿಂ ಅವರ ಅಣ್ಣ ಸೆಯ್ಯದ್‌ ಮರಾದ್‌ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next