Advertisement

ಖಾಲಿ ಬಿದ್ದಿವೆ 30 ಆಕ್ಸಿಜನ್  ಬೆಡ್‌ಗಳು

03:25 PM May 20, 2021 | Team Udayavani |

ಬೆಂಗಳೂರು: ಒಂದೊಂದು ಆಕ್ಸಿಜನ್‌ ಹಾಸಿಗೆಗಾಗಿ ಕೊರೊನಾ ಸೋಂಕಿತರು ಪರದಾಡುತ್ತಿದ್ದಾರೆ. ರೋಗಿಗಳನ್ನು ಆ್ಯಂಬುಲೆನ್ಸ್‌ನಲ್ಲಿ ಒಂದು ದಿಕ್ಕಿನಿಂದಮತ್ತೂಂದು ದಿಕ್ಕಿಗೆ ಅಲೆದಾಡುತ್ತಿದ್ದಾರೆ. ಆದರೆ,ನಗರದ ಹೃದಯಭಾಗದಲ್ಲಿ ಕಳೆದ  ಐದು ತಿಂಗಳಿಂದ 30ಕ್ಕೂ ಹೆಚ್ಚು ಆಕ್ಸಿಜನ್‌ ಹಾಸಿಗೆಗಳುಖಾಲಿ ಬಿದ್ದಿವೆ!

Advertisement

ಮಾಗಡಿ ರಸ್ತೆಯಲ್ಲಿರುವ ಕುಷ್ಠರೋಗಆಸ್ಪತ್ರೆಯಲ್ಲಿ ಆಮ್ಲಜನಕ ಸೇರಿದಂತೆ ಎಲ್ಲ ಅಗತ್ಯಸೌಲಭ್ಯಗಳನ್ನು ಒಳಗೊಂಡ 30ಕ್ಕೂ ಹೆಚ್ಚುಹಾಸಿಗೆಗಳು ಜನವರಿಯಿಂದ ಖಾಲಿ ಇವೆ. ಸರ್ಕಾರ ಇತ್ತ ತಿರುಗಿಯೂ ನೋಡಿಲ್ಲ. ವೈದ್ಯರನ್ನೂನಿಯೋಜಿಸಿಲ್ಲ. ಇದರಿಂದ ಲೆಕ್ಕಕ್ಕುಂಟು ಸೇವೆಗಿಲ್ಲ ಎನ್ನುವಂತಾಗಿದೆ. ಕ್ಸಿಜನ್‌ ಸಹಿತ ಹಾಸಿಗೆಗಳ ವಾರ್ಡ್‌ ಇದ್ದೂ ಇಲ್ಲದಂತಾಗಲು ಪ್ರಮುಖ ಕಾರಣ ಉದ್ದೇಶಿತ  ಆಸ್ಪತ್ರೆಯಲ್ಲಿನ ವೈದ್ಯರನ್ನು ಇತರೆ ಆಸ್ಪತ್ರೆಗಳಿಗೆ ನಿಯೋಜನೆ ಮಾಡಿದ್ದು, ರೋಗಿಗಳ ಚಿಕಿತ್ಸೆ ಮತ್ತು ನಿರ್ವಹಣೆ ವೈದ್ಯಕೀಯ ಸಿಬ್ಬಂದಿ ಕೊರತೆ ಉಂಟಾಗಿದೆ ಎಂದು ಮೂಲಗಳು  ಉದಯವಾಣಿಗೆ ತಿಳಿಸಿವೆ.

ರೋಗಿಗಳ ಒತ್ತಡ ಕಡಿಮೆ ಇದೆ ಎಂಬ ನೆಪದಲ್ಲಿ ಕುಷ್ಠರೋಗ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 6 ವೈದ್ಯರು, 6 ಶುಶ್ರೂಷಕರು, ಇಬ್ಬರು ಲ್ಯಾಬ್‌ಟೆಕ್ನಿಷಿಯನ್‌ ಸೇರಿ 14 ಜನ ವೈದ್ಯಕೀಯ ಸಿಬ್ಬಂದಿಯನ್ನು ಕೆ.ಸಿ.ಜನರಲ್‌ ಆಸ್ಪತ್ರೆ ಮತ್ತು ಜಯನಗರಜನರಲ್‌ ಆಸ್ಪತ್ರೆಗೆ ನಿಯೋಜಿಸಲಾಗಿದೆ.

ಇದರಿಂದ ಸೋಂಕು ಹಾವಳಿ ಪೀಕ್‌ನಲ್ಲಿರುವಹಾಗೂ ಆಕ್ಸಿಜನ್‌ ಹಾಸಿಗೆಗಳಿಗೆ ತೀವ್ರ ಬೇಡಿಕೆ ಇರುವ ಸಂದರ್ಭದಲ್ಲೇ ವಾರ್ಡ್‌ನಲ್ಲಿ ವೈದ್ಯಕೀಯ ಸಿಬ್ಬಂದಿ ಇಲ್ಲದಂತಾಗಿದೆ. ಕೊರೊನಾ ಸೋಂಕಿನಿಂದ ದೇಹದಲ್ಲಿ ಆಮ್ಲಜನಕ ಕೊರತೆಯಿಂದ ನನ್ನ ಪತಿ ತೀವ್ರ ಒದ್ದಾಡುತ್ತಿದ್ದರು.ಆಕ್ಸಿಜನ್‌ ಬೆಡ್‌ಗಾಗಿ ಹೆಬ್ಟಾಳದ ಸುತ್ತಮುತ್ತ ಆರೆಂಟು ಆಸ್ಪತೆಗಳಿಗೆ ಅಲೆದಾಡಿದ್ದಾಯಿತು. ಕೊನೆಗೆ ವೈಟ್‌ಫೀಲ್ಡ್‌ನಲ್ಲಿ ಬೆಡ್‌ ದೊರಕಿತು. ನಿತ್ಯಸಾವಿರಾರು ರೂಪಾಯಿ ಬಿಲ್‌ ಆಗುತ್ತಿದೆ. ಒಂದುವೇಳೆ ಇಲ್ಲಿಯೇ ಕುಷ್ಠರೋಗ ಆಸ್ಪತ್ರೆಯಲ್ಲಿ ಸಿಕ್ಕಿದ್ದರೆ,ಎಷ್ಟೋ ಅನುಕೂಲ ಆಗುತ್ತಿತ್ತು ಎಂದು ಹೆಬ್ಟಾಳನಿವಾಸಿ ರಾಜೇಶ್ವರಿ ತಿಳಿಸಿದರು.

ಈ ಮಧ್ಯೆ ಆಕ್ಸಿಜನ್‌ ಹಾಸಿಗೆಗಳ ವಾರ್ಡ್‌ಸೌಲಭ್ಯದ ಸಮರ್ಪಕ ಬಳಕೆ ಆಗದಿರುವುದಕ್ಕೆಆರೋಗ್ಯ ಇಲಾಖೆಯದ್ದು ಮಾತ್ರವಲ್ಲ; ಸಾರ್ವಜನಿಕರ ತಪ್ಪುಕಲ್ಪನೆ ಕೂಡ ಕಾರಣ ಎನ್ನಲಾಗಿದೆ. ಇದಕ್ಕೂಮುನ್ನ ಕಳೆದ ಸೆಪ್ಟೆಂಬರ್‌- ಡಿಸೆಂಬರ್‌ ಅವಧಿಯಲ್ಲಿಇಲ್ಲಿನ ಆಕ್ಸಿಜನ್‌ಹಾಸಿಗೆಗಳ ವಾರ್ಡ್‌ಕಾರ್ಯನಿರ್ವಹಿಸಿದೆ. ಆಗ,ಕುಷ್ಠರೋಗ ಆಸ್ಪತ್ರೆ ಎಂಬಕಾರಣಕ್ಕೆಕೆಲ ಸೋಂಕಿತರು ಇಲ್ಲಿ ದಾಖಲಾಗಲು ಹಿಂದೇಟು ಹಾಕಿದ್ದಾರೆ.

Advertisement

ಇದೇ ಕಾರಣಕ್ಕೆ ಬಿಬಿಎಂಪಿ ವಾರ್‌ ರೂಂಪೋರ್ಟಲ್‌ನಲ್ಲಿ ಈ ಆಸ್ಪತ್ರೆಯನ್ನು ಮಾಗಡಿ ರಸ್ತೆಯಕೋವಿಡ್‌ ಕೇರ್‌ ಸೆಂಟರ್‌ ಎಂದು ನಮೂದಿಸಿದಉದಾಹರಣೆಯೂ ಇದೆ.ಪೋರ್ಟಲ್‌ನಲ್ಲಿ ಹಾಸಿಗೆ ಬುಕ್ಕಿಂಗ್‌ಮಾಡಿಸಿದ ರೋಗಿಗಳು ಅಥವಾ ಅವರಸಂಬಂಧಿಗಳು ಆ್ಯಂಬುಲೆನ್ಸ್‌ನಲ್ಲಿ ಕುಷ್ಠರೋಗಆಸ್ಪತ್ರೆ ಬಾಗಿಲಿಗೆ ಬರುತ್ತಿದ್ದಂತೆ, ಈ ಆಸ್ಪತ್ರೆಗೆ ದಯವಿಟ್ಟು ಬೇಡ. ಬೇರೆ ಕಡೆ ಕರೆದೊಯ್ಯಿರಿ ಎಂದು ಅಲವತ್ತುಕೊಂಡ ಉದಾಹರಣೆಗಳು ಇವೆ. ಆಗ ಆಸ್ಪತ್ರೆ ಸಿಬ್ಬಂದಿ, ಭಯಪಡುವ ಅಗತ್ಯವಿಲ್ಲ. ತಪ್ಪುಕಲ್ಪನೆ ಬದಿಗೊತ್ತಿ, ದಾಖಲಾಗಿಎಂದು ಬೇಡಿಕೊಂಡರೂ ಕೆಲವರು ವಾಪಸ್‌ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೇ ಕಾರಣಕ್ಕೆ 2020ರ ಸೆಪ್ಟೆಂಬರ್‌- 2021ರಜನವರಿ ಮೊದಲ ವಾರದವರೆಗೆ ಈ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆದುಕೊಂಡ ಸೋಂಕಿತರು ಕೇವಲ 40ಜನ. ನಂತರದಲ್ಲಿ ರೋಗಿಗಳ ಒತ್ತಡವೂ ಕಡಿಮೆಇದ್ದುದರಿಂದ ಬೇರೆಕಡೆಗೆ ಸಿಬ್ಬಂದಿಯನ್ನು ನಿಯೋಜಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next