Advertisement

ಪಾಕ್‌ ಪ್ರತಿದಾಳಿಗೆ ಸನ್ನದ್ಧರಾಗಿರಿ: ಭಾರತೀಯ ಪಡೆಗೆ ಓವೈಸಿ ಎಚ್ಚರಿಕೆ

11:50 AM Feb 26, 2019 | Team Udayavani |

ಹೈದರಾಬಾದ್‌ : ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯು ಪಡೆ ಇಂದು ಮಂಗಳವಾರ ಪಾಕಿಸ್ಥಾನದ ಬಾಲಕೋಟ್‌ ನಲ್ಲಿನ ಜೈಶ್‌ ತರಬೇತಿ ಶಿಬಿರಗಳ ಮೇಲೆ ಬಾಂಬ್‌ ದಾಳಿ ನಡೆಸಿರುವುದನ್ನು ಎಐಎಂಐಎಂ ಮುಖ್ಯಸ್ಥ ಹಾಗೂ ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಓವೈಸಿ ಸ್ವಾಗತಿಸಿದ್ದಾರೆ.

Advertisement

ಆದರೆ ಈ ದಾಳಿಗೆ ಪ್ರತಿಯಾಗಿ ಪಾಕಿಸ್ಥಾನ ನಡೆಸಬಹುದಾದ ದಾಳಿಯನ್ನು ಎದುರಿಸಲು ಭಾರತೀಯ ಸೇನೆ ಸನ್ನದ್ಧ  ಸ್ಥಿತಿಯಲ್ಲಿ ಇರುವ ಅಗತ್ಯವಿದೆ ಎಂದವರು ಎಚ್ಚರಿಸಿದ್ದಾರೆ.

ಭಾರತೀಯ ವಾಯು ಪಡೆ ಇಂದು ನಡೆಸಿರುವ ಮಾರಕ ಹಾಗೂ ಕರಾರುವಾಕ್‌ ವಾಯು ದಾಳಿಯಲ್ಲಿ 300ಕ್ಕೂ ಅಧಿಕ ಜೈಶ್‌ ಉಗ್ರರು ಮತ್ತು ಅವರ ನಾಯಕರನ್ನು ಬಲಿಪಡೆದಿದ್ದು ಅವರ ತರಬೇತಿ ಶಿಬಿರಗಳನ್ನು ಸರ್ವನಾಶ ಮಾಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next