Advertisement

ಕೋಟಿ ಜನರನ್ನು ತಲುಪಿದ ಆಯುಷ್ಮಾನ್‌ ಭಾರತ್‌

02:49 AM May 21, 2020 | Hari Prasad |

ಹೊಸದಿಲ್ಲಿ: ಆಯುಷ್ಮಾನ್‌ ಭಾರತ್‌ ಆರೋಗ್ಯ ವಿಮಾ ಯೋಜನೆಯಿಂದ 1 ಕೋಟಿಗೂ ಅಧಿಕ ಮಂದಿ ಉಚಿತ ಚಿಕಿತ್ಸೆ ಪಡೆದಿದ್ದಾರೆ.

Advertisement

ಇದು ಪ್ರತಿ ಭಾರತೀಯನಿಗೂ ಹೆಮ್ಮೆಯ ಸಂಗತಿ. ಕೇವಲ ಎರಡೇ ವರ್ಷಗಳಲ್ಲಿ ಜಗತ್ತಿನ ಅತಿದೊಡ್ಡ ಆರೋಗ್ಯ ಸೇವೆಯ ಸಾಲಿಗೆ ಆಯುಷ್ಮಾನ್‌ ಸೇರಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮೇಘಾಲಯದ ಯೋಧನ ಪತ್ನಿ ಪೂಜಾ ಥಾಪಾ, ಒಂದು ಕೋಟಿಯ ಫ‌ಲಾನುಭವಿ ಆದ ಹಿನ್ನೆಲೆಯಲ್ಲಿ ಬುಧವಾರ ಆಕೆಯೊಂದಿಗೆ ಪ್ರಧಾನಿ ಸಂವಾದ ನಡೆಸಿದರು.

‘ಆಯುಷ್ಮಾನ್‌ ಮೂಲಕ ಬಡವರಿಗೆ, ಕೆಳಹಂತದ ಜನರಿಗೆ ಸರಕಾರದ ಮೇಲೆ ನಂಬಿಕೆ ಹೆಚ್ಚಾಗಿದೆ’ ಎಂದು ಹೇಳಿದರು.

ಕೋವಿಡ್ ಗೂ ಚಿಕಿತ್ಸೆ: ಆಯುಷ್ಮಾನ್‌ ವಿಮೆಯಡಿ, 53 ಕೋಟಿ ಮಂದಿ ಕೋವಿಡ್ ಸೋಂಕಿನ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಪ್ರಸ್ತುತ 2131 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

21,565 ಆಸ್ಪತ್ರೆಗಳಲ್ಲಿ ಈ ಯೋಜನೆಯ ಪ್ರಯೋಜನ ಲಭ್ಯವಿದೆ. ದೇಶಾದ್ಯಂತದ ಆಸ್ಪತ್ರೆಗಳಲ್ಲಿ ಸುಮಾರು 13,412 ಕೋಟಿ ರೂ.ಗಳ ಚಿಕಿತ್ಸೆಯನ್ನು ಕೇಂದ್ರ ಸರಕಾರ ಉಚಿತವಾಗಿ ನೀಡಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ತಿಳಿಸಿದೆ.

ಟಾಪ್‌ ರಾಜ್ಯಗಳು: ಗುಜರಾತ್‌, ತಮಿಳುನಾಡು, ಛತ್ತೀಸ್‌ಗಢ, ಕೇರಳ ಹಾಗೂ ರಾಜಸ್ಥಾನ ರಾಜ್ಯಗಳು ಈ ವಿಮೆಯಿಂದ ಅತಿಹೆಚ್ಚು ಪ್ರಯೋಜನ ಪಡೆದುಕೊಂಡಿವೆ.

ಚಿಕಿತ್ಸೆ ಏನೇನು?: ಆರ್ಥೋಪೆಡಿಕ್ಸ್‌, ಕಾರ್ಡಿಯಾಲಜಿ, ಸಿಂಗಲ್‌ ಸ್ಟೆಂಟ್‌ ಅಳವಡಿಕೆ, ಸೊಂಟ ಮುರಿತ, ಬೈಪಾಸ್‌ ಸರ್ಜರಿಗಳಿಗೆ ವಿಮೆ ಹೆಚ್ಚು ಬಳಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next