Advertisement

ರಾಣಿ ಪಾತ್ರದಲ್ಲಿ ಸನ್ನಿ ನಟನೆಗೆ ವಿರೋಧ

12:19 PM Oct 09, 2018 | Team Udayavani |

ಬೆಂಗಳೂರು: ರಾಷ್ಟ್ರಕೂಟರ ರಾಣಿ ವೀರ ಮಹಾದೇವಿ ಹೆಸರಿನಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ಬಾಲಿವುಡ್‌ ನಟಿ ಸನ್ನಿಲಿಯೋನ್‌ ನಟಿಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಯುವ ಸೇನೆ ಕಾರ್ಯಕರ್ತರು, ಸೋಮವಾರ ನಗರದಲ್ಲಿ ಪ್ರತಿಭಟಿಸಿದರು.

Advertisement

ಗಾಂಧಿನಗರದ ಮೌರ್ಯ ವೃತ್ತದಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಹರೀಶ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ನೂರಾರು ಕಾರ್ಯಕರ್ತರು ಸನ್ನಿಲಿಯೋನ್‌ ಪ್ರತಿಕೃತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆಯ ರಾಜ್ಯಾಧ್ಯಕ್ಷ ಹರೀಶ್‌ ಮಾತನಾಡಿ, ರಾಷ್ಟ್ರಕೂಟರ ರಾಣಿ ವೀರ ಮಹಾದೇವಿ ಸತಿ ಸಾದ್ವಿಯಾಗಿದ್ದರು. ಈ ಪಾತ್ರವನ್ನು ಸನ್ನಿ ಲಿಯೋನ್‌ ಮಾಡಿದರೆ ಮಹಾದೇವಿಯವರಿಗೆ ಅವಮಾನ ಮಾಡಿದಂತೆ. ನಿರ್ಮಾಪಕ ಡಿ.ಸಿ.ವಾಡಿ ಉದಯನ್‌ ತಮ್ಮ ಈ ನಿರ್ಧಾರದಿಂದ ಕೂಡಲೇ ಹಿಂದೆ ಸರಿಯಬೇಕು.

ನೀಲಿ ಚಿತ್ರ ತಾರೆ ಸನ್ನಿಲಿಯೋನ್‌ಗೆ ಈ ಚಿತ್ರದಲ್ಲಿ ಅಭಿನಯಿಸಲು ಅವಕಾಶ ನೀಡಿದರೆ ಬೀದಿಗಿಳಿದು ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಮೂಡಿಬರಲಿದ್ದು, ಈ ವರ್ಷಾಂತ್ಯ ತೆರೆ ಕಾಣಲಿದೆ.

Advertisement

Udayavani is now on Telegram. Click here to join our channel and stay updated with the latest news.

Next