Advertisement

ಗ್ರಾಪಂಗೆ ನಾಮ ನಿರ್ದೇಶನ: ವಿರೋಧ

06:19 AM Jun 13, 2020 | Suhan S |

ರಾಣಿಬೆನ್ನೂರ: ಗ್ರಾಪಂಗೆ ಸರ್ಕಾರ ನಾಮ ನಿರ್ದೇಶನ ಸದಸ್ಯರನ್ನು ನೇಮಕ ಮಾಡುವುದನ್ನು ತಕ್ಷಣ ಕೈಬಿಡಬೇಕು ಮತ್ತು ಆಡಳಿತಾಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿ, ಶುಕ್ರವಾರ ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಬಸನಗೌಡ ಕೋಟೂರಗೆ ಮನವಿ ಸಲ್ಲಿಸಿದರು.

Advertisement

ರೈತ ಸಂಘದ ರಾಜ್ಯ ಸಂಚಾಲಕ ರವಿಂದ್ರಗೌಡ ಪಾಟೀಲ ಮಾತನಾಡಿ, ಗ್ರಾಮ ರಾಜ್ಯ ಕನಸು ಕಂಡಿದ್ದ ಮಹಾತ್ಮ ಗಾಂಧೀಜಿ ಕನಸು ನನಸಾಗಲು ಅವಧಿ ಮುಗಿದಿರುವ ಗ್ರಾಪಂಚುನಾವಣೆ ನಡೆಸಬೇಕು, ತಕ್ಷಣ ಆಡಳಿತಾಧಿಕಾರಿಗಳನ್ನು ನೇಮಕ ಮಾಡಬೇಕು. ಯಾವುದೇ ಕಾರಣಕ್ಕೂ ನಾಮ ನಿರ್ದೇಶನ ಸದಸ್ಯರನ್ನು ನೇಮಕ ಮಾಡಬಾರದು ಎಂದು ಒತ್ತಾಯಿಸಿದರು.

ಶಾಂತಮ್ಮ ಹಿರೇಮಠದ, ವಿರುಪಾಕ್ಷಪ್ಪ ಮರಡೇರ, ದಿಳ್ಳೆಪ್ಪ ಸತ್ಯಪ್ಪನವರ, ಮನ್ಮಥ ಕರಿಯಣ್ಣನವರ, ಅನೀಲ ಮುದಿಗೌಡ್ರ, ರಾಜು ಪಾಟೀಲ, ನಾಗರಾಜ, ಹಾಲಪ್ಪ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next