Advertisement

‘ಸೋಲನ್ನು ಸವಾಲಾಗಿ ಸ್ವೀಕರಿಸಿ ಸಾಧನೆಯತ್ತ ಮುಂದುವರಿಯಿರಿ’

11:32 AM Apr 18, 2018 | |

ಮೂಲ್ಕಿ : ಕ್ರೀಡೆಯ ಮೂಲಕ ಸೋಲನ್ನು ಸವಾಲಾಗಿ ಸ್ವೀಕರಿಸಿ ಮತ್ತೆ ತನ್ನ ಸಾಧನೆಯನ್ನು ಮುಂದುವರಿಸುವ ಮುಕ್ತ ಮಾರ್ಗವಿದ್ದಂತೆ ಎಂದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಎನ್‌. ಎಸ್‌. ಮನೋಹರ ಶೆಟ್ಟಿ ಹೇಳಿದರು.

Advertisement

ಮೂಲ್ಕಿಯ ಜಯಕರ್ನಾಟಕ ಘಟಕದ ಆಶ್ರಯದಲ್ಲಿ ನಡೆದ ಪುರುಷರ ಮುಕ್ತ ವಾಲಿಬಾಲ್‌ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಯಾಗಿ ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಎಂ. ಅತುಲ್‌ ಕುಡ್ವಾ ಅವರು ಮಾತನಾಡಿ, ಕ್ರೀಡೆ ಯಾವುದೇ ಇರಲಿ ದೇಹದ ಆರೋಗ್ಯವನ್ನು ಕಾಪಾಡಿ ಉತ್ತಮ ಮನೋಸ್ಥಿತಿಯನ್ನು ಸಂರಕ್ಷಿಸುವ ಒಂದು ವ್ಯಾಯಾಮದ ಮಾರ್ಗ ಎಂದು ಹೇಳಿದರು.

ರಾಷ್ಟ್ರೀಯ ತೀರ್ಪುಗಾರ ನಾಗೇಶ್‌ ಎ. ಮುಖ್ಯ ಅತಿಥಿಗಳಾಗಿದ್ದರು.  ಘಟಕದ ಅಧ್ಯಕ್ಷ ಭಾಸ್ಕರ ಶೆಟ್ಟಿಗಾರ್‌ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ದಿನೇಶ್‌ ಶೆಟ್ಟಿ ವಂದಿಸಿದರು. ದಿನೇಶ್‌ ಕೊಲ್ನಾಡ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next