Advertisement

ರಕ್ಷಿತಾರಣ್ಯದಲ್ಲಿ ಬೇಟೆ ಅರಣ್ಯಪಾಲಕರ ಗುಂಡಿಗೆ ಓರ್ವ ಸಾವು

10:11 AM Dec 13, 2018 | Harsha Rao |

ಕಾಸರಗೋಡು: ರಕ್ಷಿತಾರಣ್ಯದಲ್ಲಿ ಬೇಟೆಯಾಡುತ್ತಿದ್ದ ತಂಡದ ಮೇಲೆ ಅರಣ್ಯಪಾಲಕರು ಗುಂಡು ಹಾರಿಸಿದ್ದರಿಂದ ಓರ್ವ ಸಾವಿಗೀಡಾಗಿದ್ದಾನೆ. ಬೇಟೆಯಾಡಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

Advertisement

ಚಿತ್ತಾರಿಕಲ್‌ ತೈಮೇನಿ ನಿವಾಸಿ ತಾನಿಕ್ಕಲ್‌ಕೊಚ್ಚು ಅಲಿಯಾಸ್‌ ಜಾರ್ಜ್‌ ವರ್ಗೀಸ್‌ (48) ಎಂದು ಗುರುತಿಸಲಾಗಿದೆ. ಕಾಸರಗೋಡು  ಚಿತ್ತಾರಿಕಲ್‌ನಿಂದ 3 ಕಿ. ಮೀ. ದೂರದಲ್ಲಿರುವ ಕರ್ನಾಟಕದ ಭಾಗಮಂಡಲ ವ್ಯಾಪ್ತಿಗೊಳಪಟ್ಟ ವಾಗಾಮಣ್‌ ತಟ್ಟದಲ್ಲಿ ಘಟನೆ ಸಂಭವಿಸಿದೆ.

ಜಾರ್ಜ್‌ ಅವರು ಸ್ನೇಹಿತರಾದ ಚಿತ್ತಾರಿಕಲ್‌ನ ಅಶೋಕನ್‌ ಮತ್ತು ಚಂದ್ರನ್‌ ಜತೆಗೆ ಮನೆಯಿಂದ 3 ಕಿ. ಮೀ. ದೂರದಲ್ಲಿರುವ ರಕ್ಷಿತಾರಣ್ಯಕ್ಕೆ ವನ್ಯಜೀವಿ ಬೇಟೆಗೆಂದು ಹೋಗಿದ್ದರು. ಆ ವೇಳೆ ಗಸ್ತು ತಿರುಗುತ್ತಿದ್ದ ಅರಣ್ಯಪಾಲಕರು ಹಾರಿಸಿದ ಗುಂಡು ಜಾರ್ಜ್‌ ಅವರ ಎದೆಗೆ ತಗಲಿ ಸಾವಿಗೀಡಾದರು. ಅವರ ಜತೆಗಿದ್ದ ಅಶೋಕನ್‌ ಮತ್ತು ಚಂದ್ರನ್‌ನನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next