Advertisement

ಶ್ರೀನಿ ಕೈಯಲ್ಲಿ “ಓಲ್ಡ್‌ ಮೊಂಕ್‌’

09:59 AM Dec 19, 2019 | Lakshmi GovindaRaj |

ಈ ಹಿಂದೆ “ಶ್ರೀನಿವಾಸ ಕಲ್ಯಾಣ’ ಮತ್ತು “ಬೀರ್‌ಬಲ್‌’ ಚಿತ್ರದ ಮೂಲಕ ಪ್ರೇಕ್ಷಕರಿಗೆ ಕಾಮಿಡಿ ಕಚಗುಳಿ ಇಟ್ಟಿದ್ದ ನಟ ಕಂ ನಿರ್ದೇಶಕ ಶ್ರೀನಿ (ಶ್ರೀನಿವಾಸ್‌) ಈಗ ಮತ್ತೂಂದು ಅಂಥದ್ದೇ ಕಾಮಿಡಿ ಕಹಾನಿಯನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದ್ದಾರೆ. ಅಂದಹಾಗೆ, ಈ ಬಾರಿ ಶ್ರೀನಿ ತಮ್ಮ ಚಿತ್ರಕ್ಕೆ ಇಟ್ಟಿರುವ ಹೆಸರು “ಓಲ್ಡ್‌ ಮೊಂಕ್‌’! ಈ ಬಗ್ಗೆ ಮಾತನಾಡುವ ಶ್ರೀನಿ, “ಎಲ್ಲರೂ ಚಿತ್ರದ ಟೈಟಲ್‌ ಕೇಳಿದ್ರೆ ಬೇರೆ ಥರ ಯೋಚಿಸುತ್ತಾರೆ.

Advertisement

ಆದ್ರೆ ಸಿನಿಮಾದಲ್ಲಿ ನಾವು ಹೇಳುತ್ತಿರುವುದೇ ಬೇರೆ. ಒಮ್ಮೆ ಶ್ರೀಕೃಷ್ಣ ಮತ್ತು ರಾಧೆ ರಮಿಸುತ್ತಿರುವಾಗ ಅವರ ಮಧ್ಯೆ ಬರುವ ನಾರದ ಇಬ್ಬರಿಗೂ ಫಿಟಿಂಗ್‌ ಇಟ್ಟು ಹೋಗುತ್ತಾನೆ. ಇದರಿಂದ ರಾಧೆ ಕೃಷ್ಣನಿಂದ ದೂರವಾಗುತ್ತಾಳೆ. ಆಗ ಒಂದು ಹುಡುಗಿಯನ್ನು ಪಟಾಯಿಸುವುದು ಎಷ್ಟು ಕಷ್ಟ ಅನ್ನೋದು ನಾರದನಿಗೆ ಅರ್ಥ ಮಾಡಿಸಲು ಕೃಷ್ಣ ಅವನಿಗೆ ಶಾಪ ಕೊಟ್ಟು ಮನುಷ್ಯ ರೂಪದಲ್ಲಿ ಭೂಮಿಗೆ ಕಳುಹಿಸುತ್ತಾನೆ.

ಅದೇ ಫಿಟಿಂಗ್‌ ಇಡುವ ಗುಣಗಳನ್ನು ಇಟ್ಟುಕೊಂಡು ಭೂಮಿಗೆ ಮನುಷ್ಯನ ರೂಪದಲ್ಲಿ ಬರುವ ನಾರದ ಇಲ್ಲಿ ಏನೇನು ಮಾಡ್ತಾನೆ ಅನ್ನೋದೆ ಕಥೆ’ ಎಂದು ಚಿತ್ರದ ಕಥಾಹಂದರವನ್ನು ಬಿಚ್ಚಿಡುತ್ತಾರೆ ಶ್ರೀನಿ. “ಇಡೀ ಸಿನಿಮಾ ಲವ್‌ ಕಂ ರೊಮ್ಯಾಂಟಿಕ್‌ ಕಾಮಿಡಿಯಾಗಿ ಸಾಗುತ್ತದೆ. ಒಂದಷ್ಟು ಕಾಲ್ಪನಿಕ ಅಂಶಗಳನ್ನು ಇಟ್ಟುಕೊಂಡು, ಮನರಂಜನಾತ್ಮಕವಾಗಿಸಾಗುವ ಚಿತ್ರ. ಕೊನೆಯಲ್ಲಿ ಒಂದು ಫಿಲಾಸಫಿಯನ್ನು ಕೂಡ ಹೇಳುತ್ತದೆ.

“ಓಲ್ಡ್‌ ಮೊಂಕ್‌’ ಅಂದ್ರೆ ಹಳೆಯ ಸನ್ಯಾಸಿ ಅಂಥ. ನಮ್ಮಲ್ಲಿ ಹಳೆಯ ಸನ್ಯಾಸಿ ಅಂದ್ರೆ ಮೊದಲು ನೆನಪಿಗೆ ಬರುವ ಹೆಸರು ನಾರದನದ್ದು. ಹಾಗಾಗಿ ಚಿತ್ರದ ಸಬ್ಜೆಕ್ಟ್ಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಈ ಟೈಟಲ್‌ ಇಟ್ಟುಕೊಂಡಿದ್ದೇವೆ’ ಎಂದು ವಿವರಣೆ ಕೊಡುತ್ತಾರೆ ಶ್ರೀನಿ. ಸದ್ಯ “ಓಲ್ಡ್‌ ಮೊಂಕ್‌’ ಚಿತ್ರದ ಸ್ಕ್ರಿಪ್ಟ್ ಕಾರ್ಯಗಳು ಬಹುತೇಕ ಪೂರ್ಣಗೊಂಡಿದ್ದು, ಚಿತ್ರದಲ್ಲಿ ನಿರ್ದೇಶಕ ಕಂ ನಾಯಕ ಶ್ರೀನಿ ಅವರಿಗೆ ನಾಯಕಿಯ ಹುಡುಕಾಟ ನಡೆಯುತ್ತಿದೆ.

ಉಳಿದ ಪಾತ್ರಗಳಿಗೂ ಒಂದಷ್ಟು ಕಲಾವಿದರ ಹುಡುಕಾಟ ನಡೆಯುತ್ತಿದ್ದು, ಮುಂದಿನ ಜನವರಿ ವೇಳೆಗೆ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ. ಬೆಂಗಳೂರು, ಮೈಸೂರು ಮತ್ತಿತರ ಕಡೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ಶ್ರೀಶ ಕೂದುವಳ್ಳಿ ಛಾಯಾಗ್ರಹಣ, ಸೌರಭ್‌ ವೈಭವ್‌ ಸಂಗೀತವಿದೆ. ಶ್ರೀನಿ, ಸಂತೋಷ್‌ ನಂದಕುಮಾರ್‌, ಪ್ರಸನ್ನ ಜಂಟಿಯಾಗಿ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ರಚಿಸಿದ್ದಾರೆ. “ಸಿದ್ಧಿ ಎಂಟರ್‌ಟೈನ್ಮೆಂಟ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಮುಂದಿನ ಜುಲೈ ವೇಳೆಗೆ ತೆರೆಗೆ ತರುವ ಯೋಚನೆ ಇದೆ ಎನ್ನುತ್ತಾರೆ ಶ್ರೀನಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next