Advertisement

ಚುನಾವಣೆಗೆ “ತೈಲ’ತಲೆನೋವು!

06:45 AM Oct 29, 2017 | Team Udayavani |

ಹೊಸದಿಲ್ಲಿ: ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಭಾರಿ ಹೆಚ್ಚಳ ಕಾಣುವ ಸಾಧ್ಯತೆ ಇದ್ದು. ಗುಜರಾತ್‌ ಹಾಗೂ ಹಿಮಾಚಲ ಚುನಾವಣೆ ತಯಾರಿಯಲ್ಲಿರುವ ಆಡಳಿತಾರೂಢ ಬಿಜೆಪಿಗೆ ಇದು ದೊಡ್ಡ ತಲೆನೋವಾಗಿ ಕಾಡುವ ಸಾಧ್ಯತೆಗಳಿವೆ.
ಪ್ರತಿ ಬ್ಯಾರೆಲ್‌ ಕಚ್ಚಾ ತೈಲ ಬೆಲೆ 60 ಡಾಲರ್‌(3,893 ರೂ.)ಗೆ ಏರಿಕೆ ಆಗುವ ಎಲ್ಲಾ ಲಕ್ಷಣಗಳು ದಟ್ಟವಾಗಿದೆ.

Advertisement

ಜಾಗತಿಕ ಮಾರುಕಟ್ಟೆಯಲ್ಲಿ ಶುಕ್ರವಾರದ ವಹಿವಾಟು ಪ್ರತಿ ಬ್ಯಾರೆಲ್‌ಗೆ 59.30ಡಾಲರ್‌ನಷ್ಟಾಗಿದ್ದರೆ, ಗುರುವಾರ 59.55 ಡಾಲರ್‌ನಷ್ಟಿತ್ತು. ಇಷ್ಟೊಂದು ಏರಿಳಿತ ಕಂಡಿರುವುದು 2015, ಜುಲೈ ಬಳಿಕ ಇದೇ ಮೊದಲು. ಭಾರತ ಆಮದು ಮಾಡಿಕೊಳ್ಳುವ ತೈಲ ಪ್ರಮಾಣ ಈಗ ಶೇ.82ರಷ್ಟಿದೆ. ಈ ಪೈಕಿ ಶೇ.28ರಷ್ಟು ಬ್ರೆಂಟ್‌ ಬೆಂಚ್‌ಮಾಕ್ಡ್ì ಕಚ್ಚಾತೈಲ 
ವಾಗಿದ್ದರೆ, ಉಳಿದ ಶೇ.72ರಷ್ಟು ದುಬೈ ಮತ್ತು ಓಮನ್‌ನಿಂದ ಆಮದು ಮಾಡಿ ಕೊಳ್ಳುವಂಥದ್ದಾಗಿದೆ.

ಭಾರತ ಪ್ರತಿ ಬ್ಯಾರೆಲ್‌ಗೆ ಬುಧವಾರ 56.79ಡಾಲರ್‌ ಹಾಗೂ ಗುರುವಾರ 56.92ಡಾಲರ್‌ಗೆ ಆಮದು ಮಾಡಿಕೊಂಡಿದೆ. ಅಂದರೆ ಬ್ಯಾರಲ್‌ಗೆ ಅಂದಾಜು 3,900 ರೂ. ನಷ್ಟು ಭರಿಸಿ ಆಮದುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಬ್ಯಾರೆಲ್‌ ಬೆಲೆ 60 ಡಾಲರ್‌ ಗಡಿ ದಾಟಬಹುದು ಎಂದು ವಿಶ್ಲೇಷಿಸಲಾಗುತ್ತಿದ್ದು, ಇದು ರಾಜಕೀಯವಾಗಿಯೂ ಸಾಕಷ್ಟು ಪರಿಣಾಮ ಬೀರುವ ಸಾಧ್ಯತೆಯಿದೆ.

ಘೋಷಣೆ ಕೂಗಲು 10 ಸಾವಿರ ರೂ!
ಅಹಮದಾಬಾದ್‌, ಅ. 28: “ಕಳೆದ 3-4 ದಿನಗಳಲ್ಲಿ ನಾನು ರ್ಯಾಲಿಗಳಿಗೆ ಹೋಗಿದ್ದೆ. ಎಲ್ಲ ದುಡೂx ಖಾಲಿಯಾಯಿತು. ಸೂರತ್‌ನಲ್ಲಿ ಅಮಿತ್‌ ಶಾ ರ್ಯಾಲಿಯಲ್ಲಿ ಶಾ ವಿರುದ್ಧ ಘೋಷಣೆ ಕೂಗುವುದಕ್ಕೆಂದೇ ನನಗೆ 10 ಸಾವಿರ ರೂ. ಕೊಟ್ಟಿದ್ದು ಎಂದು ಅವರು ಹೇಳಿದ್ದಾರೆ’.

ಇತ್ತೀಚೆಗಷ್ಟೇ ಬಿಜೆಪಿ ವಿರುದ್ಧ 1 ಕೋಟಿ ರೂ. ಆಮಿಷದ ಆರೋಪ ಮಾಡಿದ್ದ ಪಟೇಲ್‌ ಮೀಸಲು ಹೋರಾಟಗಾರ ನರೇಂದ್ರ ಪಟೇಲ್‌ ಅವರು ದೂರವಾಣಿಯಲ್ಲಿ ಆಡಿರುವ ಮಾತಿದು. ನರೇಂದ್ರ ಪಟೇಲ್‌ ಯಾರೊಂದಿಗೋ ಹೀಗೆಂದು ಹೇಳುತ್ತಿರುವ ಆಡಿಯೋ ಕ್ಲಿಪ್‌ ಬಿಡುಗಡೆಯಾಗಿದ್ದು, ಗುಜರಾತ್‌ ಚುನಾವಣಾ ಕಣದಲ್ಲಿ ಪಕ್ಷಗಳ ಕೆಸರೆರಚಾಟಕ್ಕೆ ಇಂಬು ನೀಡಿದೆ. ಹಾರ್ದಿಕ್‌ ಪಟೇಲ್‌ ಅವರ ಬೆಂಬಲಿಗ ನರೇಂದ್ರ ಪಟೇಲ್‌ ಇತ್ತೀಚೆಗಷ್ಟೇ ಬಿಜೆಪಿ ಸೇರಿ, ನಂತರ ರಾತ್ರೋರಾತ್ರಿ ಸುದ್ದಿಗೋಷ್ಠಿ ಕರೆದು, “ಹಾರ್ದಿಕ್‌ ಪಟೇಲ್‌ ಸಂಘಟನೆ ತೊರೆಯಲು ನನಗೆ ಬಿಜೆಪಿ 1 ಕೋಟಿ ರೂ. ಆಮಿಷ ನೀಡಿತ್ತು’ ಎಂದು ಹೇಳಿಕೊಂಡಿದ್ದರು. ಇದೀಗ ಈತನ ವಿರುದ್ಧವೇ ಬಿಡುಗಡೆಯಾದ ಆಡಿಯೋ ಕ್ಲಿಪ್‌ ಭಾರೀ ಸಂಚಲನ ಮೂಡಿಸಿದೆ.

Advertisement

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ರ್ಯಾಲಿಯಲ್ಲಿ ಪ್ರತಿಭಟನೆಯ ಘೋಷಣೆ ಕೂಗಲು 10 ಸಾವಿರ ರೂಪಾಯಿ ಕೊಟ್ಟಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿರುವ ಆಡಿಯೋ ರೆಕಾರ್ಡಿಂಗ್‌ ಇದಾಗಿದ್ದು, ಇದರಲ್ಲಿನ ಧ್ವನಿ ನರೇಂದ್ರ ಪಟೇಲ್‌ರದ್ದು ಎನ್ನಲಾಗಿದೆ. ಪ್ರತಿಭಟನೆಗಾಗಿ ಹಾರ್ದಿಕ್‌ ಪಟೇಲ್‌ ತಂಡ ಹಣ ಪಡೆಯುತ್ತಿತ್ತು ಎಂಬುದು ಈ ಮಾತಿನಲ್ಲಿ ಕೇಳಿಬರುತ್ತದೆ.

ಆನ್‌ಲೈನ್‌ನಲ್ಲಿ ಅಭಿವೃದ್ಧಿಯ ಮಂತ್ರ: ಇನ್ನೊಂದೆಡೆ, ಚುನಾವಣೆ ಕಾವೇರುತ್ತಿದ್ದಂತೆ ಆನ್‌ಲೈನ್‌ನಲ್ಲಿ ಅಭಿವೃದ್ಧಿ ಕುರಿತ ಚರ್ಚೆ ತಾರಕಕ್ಕೇರಿದೆ. ಆಗಸ್ಟ್‌ನಲ್ಲಿ ಶುರುವಾದ ವಿಕಾಸ್‌ ಗಾಂಡೋ ಥಾಯೋ ಚೆ (ವಿಕಾಸ ಮಿತಿ ಮೀರಿದೆ) ಎಂಬ ಘೋಷವಾಕ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೀಡಾಗಿದೆ. ಈ ಹ್ಯಾಶ್‌ಟ್ಯಾಗನ್ನು ಕಾಂಗ್ರೆಸ್‌ ಹಾಗೂ ಬಿಜೆಪಿಗಳೆರಡೂ ಯಥೇತ್ಛವಾಗಿ ಬಳಸುತ್ತಿವೆ. ಇಂದಿಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಧಾನಿ ಮೋದಿಯೇ ಜನಪ್ರಿಯತೆಯಲ್ಲಿ ಮುಂದಿದ್ದಾರೆ. ನಂತರದ ಸ್ಥಾನದಲ್ಲಿ ರಾಹುಲ್‌ ಗಾಂಧಿ ಇದ್ದಾರೆ ಎಂದು ಅಹಮದಾಬಾದ್‌ನ ಸಾಮಾಜಿಕ ಅಂತರ್ಜಾಲ ತಾಣ ಪರಿಣಿತರು ಹೇಳಿದ್ದಾರೆ. ಇನ್ನೊಂದೆಡೆ ಗುಜರಾತ್‌ ಸಿಎಂ ವಿಜಯ್‌ ರೂಪಾನಿಗಿಂತ ಹಾರ್ದಿಕ್‌ ಪಟೇಲ್‌, ಒಬಿಸಿ ಮುಖಂಡ ಅಲ್ಪೇಶ್‌ ಠಾಕೂರ್‌ ಬಗ್ಗೆ ಕಳೆದ 2 ತಿಂಗಳಿನಲ್ಲಿ ಹೆಚ್ಚು ಹುಡುಕಾಟ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next