Advertisement

ಪಿಂಚಣಿ ದಾಖಲೆ ಸರಿಪಡಿಸಿಲು 10 ಸಾವಿರ ರೂ ಲಂಚ ಕೇಳಿದ್ದ ಪ್ರಥಮ ದರ್ಜೆ ಸಹಾಯಕ ಎಸಿಬಿ ಬಲೆಗೆ

03:59 PM Aug 10, 2021 | Team Udayavani |

ಹುಬ್ಬಳ್ಳಿ: ಇಲ್ಲಿನ ಮಿನಿ ವಿಧಾನ ಸೌಧದಲ್ಲಿರುವ ಖಜಾನೆ ಇಲಾಖೆಯ ನಿವೃತ್ತಿ ವೇತನ ವಿಭಾಗದ ಪ್ರಥಮ ದರ್ಜೆ ಸಹಾಯಕ ಮಂಗಳವಾರ ಎಸಿಬಿ ಬಲೆಗೆ ಬಿದ್ದಿದ್ದಾನೆ.

Advertisement

ನಿವೃತ್ತ ಎಎಸ್‌ಐರೊಬ್ಬರ ಪಿಂಚಣಿ ದಾಖಲೆ ಸರಿಪಡಿಸಿ ನೀಡಲು, ಪಿಂಚಣಿ ವಿಭಾಗದ ಅಭಿಲಾಷ ಆಲೂರ 10 ಸಾವಿರ ರೂ. ಬೇಡಿಕೆ ಇಟ್ಟು 3 ಸಾವಿರ ರೂ.ಗೆ ವ್ಯವಹಾರ ಕುದರಿಸಿಕೊಂಡು, ಕಚೇರಿಯಲ್ಲಿಯೇ ಹಣ ಪಡೆಯುತ್ತಿದ್ದಾಗ ಎಸಿಬಿ ಡಿಎಸ್‌ಪಿ ವೇಣುಗೋಪಾಲ ನೇತೃತ್ವದ ತಂಡ ದಾಳಿ ಮಾಡಿ ಹಣ ಸಮೇತ ವಶಕ್ಕೆ ಪಡೆದಿದೆ.

ಖಜಾನೆ ಅಧಿಕಾರಿಗೆ ಹಣ ನೀಡಬೇಕೆಂದು ಹೇಳಿ, ಎಫ್ ಡಿಸಿ ಹಣ ಪಡೆಯುತ್ತಿದ್ದರಿಂದ ಅಧಿಕಾರಿ ಪ್ರಕಾಶ ಎಸ್. ಹಳಪೇಟೆ ಅವರನ್ನು ವಿಚಾರಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ:ವಿಶೇಷ ಚೇತನ ವಿದ್ಯಾರ್ಥಿನಿ ಮನೆಗೆ ತೆರಳಿ ಅಭಿನಂದಿಸಿದ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್

ಹಾವೇರಿಯಲ್ಲಿ ಎಎಸ್‌ಐ ಆಗಿ ನಿವೃತ್ತರಾದ ಮಲ್ಲಣ್ಣ ಬಿರಾದಾರ ದೇಸಾಯಿ, ದಾಖಲೆ ಸರಿ ಪಡಿಸಲು ಲಂಚ ಕೇಳುತ್ತಿರುವ ಬಗ್ಗೆ, ಎಸಿಬಿಗೆ ದೂರು ನೀಡಿದ್ದರು.

Advertisement

ನಿವೃತ್ತರಾದ ನಂತರ ತಮ್ಮ ನಿವೃತ್ತಿ ವೇತನ ಹುಬ್ಬಳ್ಳಿಯಲ್ಲಿ ದೊರಕುವಂತೆ ಮಾಡಿಕೊಳ್ಳಲು ಮನವಿ ಸಲ್ಲಿಸಿದ್ದರು. ಎಫ್‌ಡಿಎ ಅಭಿಷೇಕ ದಾಖಲೆ ಸರಿಪಡಿಸಿ ಪಿಂಚಣಿ ದೊರಕುವಂತೆ ಮಾಡಲು 10 ಸಾವಿರ ರೂ. ಲಂಚದ ಬೇಡಿಕೆಯಿಟ್ಟಿದ್ದ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next